ಗದಗ,ಜು.30:: ಶರಣರ ಜ್ಞಾನ ಯೋಗಾಶ್ರಮ ಟ್ರಸ್ಟ್ (ರಿ) ಗದಗ, ಎಸ್.ಆರ್.ಕೆ. ಯೋಗ ಸಮಿತಿ ಕೋರೆಕೊಪ್ಪ ಹಾಗೂ ಆರೋಗ್ಯ ಸಂಗಮ ಸೇವಾ ಫೌಂಡೇಶನ್ ಬೈಲಹೊಂಗಲ ಇವುಗಳ ಜಂಟಿ ಆಶ್ರಯದಲ್ಲಿ ಗದಗ ಜಿಲ್ಲೆಯಲ್ಲಿ ದ್ವಿತೀಯ ಬಾರಿಗೆ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ-೨೦೨೬ ಅನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯು ಬರುವ ಅಕ್ಟೋಬರ್ ೩, ೨೦೨೬ರಂದು ಬೆಳಿಗ್ಗೆ ೭:೦೦ ಗಂಟೆಗೆ ಗದಗ ನಗರದ ಮುಳುಗುಂದ ರಸ್ತೆಯಲ್ಲಿರುವ ಕನಕ ಭವನ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಸನ ಸ್ಪರ್ಧಿಗಳು ಭಾಗವಹಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರಾದ ಎ. ರಾಘವೇಂದ್ರ, ಚಿದಂಬರ ರಾವ್ ಹಾಗೂ ಸಿ. ಕೆ. ಪ್ರಕಾಶ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
ಸ್ಪರ್ಧೆಯ ನಿಯಮಾವಳಿಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಎ. ರಾಘವೇಂದ್ರ: ೯೭೪೦೩ ೫೯೯೭೨, ಚಿದಂಬರ ರಾವ್: ೯೦೩೫೮ ೭೮೯೫೦, ಸಿ.ಕೆ.ಪ್ರಕಾಶ್: ೯೯೦೧೭ ೦೧೩೩೦ ಸಂಪರ್ಕಿಸಬಹುದಾಗಿದೆ: