LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮೊದಲಿನ ಮೀಸಲಾತಿ ಅನ್ವಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕೆಂದು ಆಗ್ರಹಿಸಿ ಮನವಿ

ಕಾಗವಾಡ:ಒಂದು ಪಂಗಡಕ್ಕೆ ನ್ಯಾಯ ಒಂದು ಪಂಗಡಕ್ಕೆ ಅನ್ಯಾಯ ಎಸಗಿದಂತಾಗುತ್ತದೆ.ಆದರಿಂದ ನಾಗಮೋಹನದಾಸರವರು ಜನಗಣತಿಯ ವರದಿಯು ಸರಿಯಾಗಿ ಆಗಿರುವುದಿಲ್ಲ. ಪರಿಶಿಷ್ಟ ಜಾತಿಯಲ್ಲಿ ಪ್ರವರ್ಗ ಬಿ ಸಂಖ್ಯೆ `ಹೆಚ್ಚಿನ ಪ್ರಮಾಣದ ಇದು ನಮ್ಮ ಪಂಗಡಕ್ಕೆ ಹೊಲೆಯ ಸಂಬಂಧಿತ ಜಾತಿಗಳಿಗೆ ವಂಚಿಸಿ ವರದಿಯನ್ನು ನೀಡಿರುತ್ತಾರೆ. ಆದರಿ ವರದಿಯು ಅವೈಜ್ಞಾನಿಕವಾಗಿದ್ದು ಈ ವರದಿಯನ್ನು ಜಾರಿ ಮಾಡದೆ ತಿರಸ್ಕರಿಸಬೇಕುಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾಗವಾಡ,ಆಗ್ರಹಿಸಿದರು.
ಅವರು ಸೋಮವಾರ ದಿ.23 ರಂದು ಕಾಗವಾಡ ತಹಶಿಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಅವರು ಮುಂದೆ ಮಾತನಾಡುತ್ತಾ,ಇತ್ತೀಚಿಗೆ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ಸಂಖ್ಯೆಗೆ ಅನುಗುಣವಾಗಿ ಜಾತಿ ಜನಗಣತಿ ಮಾಡಿ ವರ್ಗಿಕರಣನ್ವಯ ಒಳ ಮೀಸಲಾತಿ ಕಲ್ಪಿಸುವ ಸರ್ಕಾರವು ನ್ಯಾಯಮೂರ್ತಿ ನಾಗಮೋಹನದಾಸರವರ ಆಯೋಗವನ್ನು ರಚಿಸಿತ್ತು. ಅದರಂತೆ ನಾಗಮೋಹನದಾಸರವರು ಆಯೋಗದ ವರದಿಯಲ್ಲಿ ಪ್ರವರ್ಗ ಎ,ಪವರ್ಗ ಬಿ, ಪ್ರವರ್ಗ ಸಿ. ಎಂದು 17% ಮೀಸಲಾತಿ ಅನ್ವಯ 6:6:4:1 ಮೀಸಲಾತಿ. ವರ್ಗೀಕರಿ ಸಿ ವರದಿಯನ್ನು ಸರ್ಕಾರಕ್ಕೆ ನೀಡಿದ್ದು ಇರುತ್ತದೆ ಆದರೆ ಇದಕ್ಕೆ ಸಂಬಂಧಿತವಾಗಿ ಕರ್ನಾಟಕ ಉಚ್ಚನ್ಯಾಯಾಲಯ ಬೆಂಗಳೂರುನಲ್ಲಿ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನೆ ಮಾಡಿದಾಗ ನ್ಯಾಯಾಲಯವು ಯಾವುದೇ ಕಾರಣಕ್ಕೆ ಮೀಸಲಾತಿಯ ಪ್ರಮಾಣ 50% ಮೀರು ಕೂಡದು ಎಂದು ಅಭಿಪ್ರಾಯ ಪಡಿಸುತ್ತಾ ಇದು ಮೀಸಲಾತಿಯ ಪ್ರಮಾಣ 56% ಆಗುತ್ತದೆ ಎಂದು ಹೇಳಿ ಸದರಿ 07% ಮೀಸಲಾತಿ ಅನ್ವಯಿಸುವುದಕ್ಕೆ ತಡೆಯಾಜ್ಞೆ ನೀಡಿ ಆದೇಶ ಇರುತ್ತದೆ. ಆದರೆ ಈಗ ಸರ್ಕಾರವು ಮೊದಲಿನ 15 % ಮೀಸಲಾತಿ ಅನ್ವಯ ಒಳ ಮೀಸಲಾತಿ ಜಾರಿಗೊಳಿಸುವ ಹುನ್ನಾರ ನಡೆಸಿರುತ್ತಾರೆ.ಎಂದ ಅವರು ನ್ಯಾಯಮೂರ್ತಿ ನಾಗಮೋಹನದಾಸರವರ ಅವೈಜ್ಞಾನಿಕ ಒಳ ಮೀಸಲಾತಿ ವರ್ಗೀಕರಣ ವರದಿಯನ್ನು ತಿರಸ್ಕರಿಸಿ ಮೊದಲಿನ ಮೀಸಲಾತಿ ಅನ್ವಯ ಸರ್ಕಾರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕೆಂದು ಆಗ್ರಹಿಸುತ್ತದೆ.

ಇದೆ ವೇಳೆ  ಅನೇಕ ದಲಿತ ಸಂಘಟನೆಗಳಿಂದ ತಹಶಿಲ್ದಾರ ರವೀಂದ್ರ ಹಾದಿಮನಿ ಅವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ  ಮನವಿ ಸಲ್ಲಿಸಲಾಯಿತು.

 ಈ ವೇಳೆ. ಸಂಜಯ ತಳವಲಕರ,ರವಿ ಕಾಂಬಳೆ,ಸಚೀನ ಪೂಜಾರಿ, ವಿಜಯ ಅಸೋದೆ, ಈಶ್ವರ ಕಾಂಬಳೆ, ಜಯಾಪಲ ಬಡಿಗೇರ,ಮಲ್ಲಿಕಾರ್ಜುನ ಕಾಂಬಳೆ, ದಯಾನಂದ ಕಾಂಬಳೆ, ರಾಜು ಪವಾರ, ಪ್ರಕಾಶ ಕಾಂಬಳೆ ವಿದ್ಯಾಧರ ಧೋಡಾರೆ, ಮಹಾಂತೇಶ್ ಬಡಿಗೇರ,ಮಹಾಂತೇಶ್ ವರಾಳೆ,ಜನಾರ್ಧನ್ ಧೋಡಾರೆ,ಉದಯ ಖೋಡೆ,ಶೇಖರ್ ಹೊನ್ನಕಾಂಬ್ಳೆ,ವಿನೋದ್ ಕಾಂಬಳೆ,, ಸಿದ್ರಾಮ್ ಬಸ್ತವಾಡ,ಉಪಸ್ಥಿತರಿದ್ದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್