LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

"ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ"

ಯರಗಟ್ಟಿ: ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ. ಇಡೀ ಜಗತ್ತಿಗೆ ಆದರ್ಶ ಪುರುಷ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ, ಲಕ್ಷ್ಮಣ, ಶ್ರೀ ಹನುಮಾನ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಹಾಠಾಪನೆಗೂ ನೂತನ ಶ್ರೀ ರಾಮ ಮಂದಿರ ಉದ್ಘಾಟನಾ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದ ಅವರು, ಶ್ರೀರಾಮ ಮಾನವೀಯ ಮೌಲ್ಯಗಳ ಸಕಾರ ಮೂರ್ತಿ, ಸನಾತನ ಸಂಸ್ಕ್ರತೀಯ ಪ್ರತೀಕ, ಆದರ್ಶ ಬದುಕನ್ನು ಹೇಗೆ ನಡೆಸಬೇಕು ಎಂಬುದನ್ನು ಜಗತ್ತಿಗೆ ತೊರಿಸಿಕೊಟ್ಟ ವಿನಯ ಮೂರ್ತಿ ಎಂದರು.ಶಿಂದೋಗಿ ಗುರು ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಭಕ್ತಿಯಿಂದ ದೇವರ ನಾಮ ಸ್ಮರಣೆ ಮಾಡಿದಾಗ ಮಾತ್ರ ದೆವರ ಕರುಣೆ ಸಾಧ್ಯ ಎಂದು ಹೇಳಿದರು.

ಸಮಾಜ ಸೇವಕ ಪಂಚನಗೌಡ ದ್ಯಾಮನಗೌಡರ, ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಡ್ಡಿ ಮಾತನಾಡಿ, ಇಂದಿನ ಯುವಕರು ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಂಡು ಮಾದರಿ ವ್ಯಕ್ತಿಗಳಾಗಿ ಎಂದರು. ಶ್ರೀಗಳನ್ನು, ಗಣ್ಯರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಇದಕ್ಕೂ ಮುಂಚೆ ಬೆಳಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪುಷ್ಹಾಪಾಲಂಕಾರ ಹಾಗೂ ವಸ್ತ್ರಾಲಂಕಾರ ಸೇವೆ ನಡೆಯಿತು. ಅನ್ನಸಂತರ್ಪಣೆ ನಡೆಯಿತು.

ಹಣ್ಣಿಕೇರಿ ಸಿದ್ದ ಶಿವಬಸವ ಮಠದ ಶರಣಮ್ಮ ತಾಯಿ, ಮಳ್ಳಿಕೇರಿ ರಾಮ ಮಂದಿರ ಕನ್ಹಯ್ಯ ದಾವೂಜೀದಾಸ ಪ್ರಭುಜೀ, ರಾಮ ಮಂದಿರ ಸೆವಾ ಸಮೀತಿ ಅದ್ಯಕ್ಷ ಫಕೀರಪ್ಪ ದಾಗನಾಯ್ಕರ ಅಧ್ಯಕ್ಷತೆ ವಹಿಸಿದ್ದರು, ಮುಖಂಡ ಶ್ರೆಯಸ ಮಾಮನಿ, ಪುಂಡಲೀಕ ಮೇಟಿ, ಸೋಮಲಿಂಗಪ್ಪ ಮುಗಳಿ, ನಿವೃತ್ತ ಶಿಕ್ಷಕ ಭರಮಪ್ಪ ಜಗಮೈನವರ, ಮೈತ್ರಾ ಹೊಂಗಲ, ಚಂದ್ರಯ್ಯ ಹಿರೇಮಠ, ಸಣಗೌಡ ಸಣಗೌಡ್ರ, ಮಹಾಂತೇಶ ಗೌಡರ, ಸೋಮಲಿಂಗಪ್ಪ ಚವಡಪ್ಪನವರ, ಪಕೀರಪ್ಪ ಸಣ್ಣಗೌಡರ, ಬಸವರಾಜ ಕುರಗುಂದ, ಭೀಮಪ್ಪ ಸತ್ಯನಾಯ್ಕರ, ಶಿವನಾಯ್ಕ ಸತ್ಯನಾಯ್ಕರ, ವಿಠ್ಠಲ ಹಲಗಲಿ, ಅಜ್ಜಪ್ಪ ನಾಯ್ಕರ, ಬಸಲಿಂಗಪ್ಪ ಚವಡಪ್ಪನವರ, ಬಸಪ್ಪ ಚವಡಪ್ಪನವರ, ಬಸವರಾಜ ಹಳೇಮನಿ, ಸಂಗ್ರಾಮ ಗೌಡರ ಮತ್ತಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್