ಸಂಕೇಶ್ವರ : ಮುಂಬರುವ 2027ರಲ್ಲಿ ಜರುಗಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆಯ ಅಂಗವಾಗಿ ಸಾಂಪ್ರದಾಯಿಕ 'ಕೋಣ ಬಿಡುವ' ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಐತಿಹಾಸಿಕ ಸಂಕೇಶ್ವರ ಮಹಾಲಕ್ಷ್ಮಿ ದೇವಿ ಜಾತ್ರಾಯು ಪ್ರತಿ 11 ವರ್ಷಗಳಿಗೊಮ್ಮೆ ಅದ್ದೂರಿಯಾಗಿ ಜರುಗುತ್ತದೆ ಇದರ ಪೂರ್ವದಲ್ಲಿ ಜಾತ್ರೆಗೆ ಕೋಣ ಬಿಡುವ ಪ್ರತೀಕವಿದ್ದು, ಅದರಂತೆ ಹಕ್ಕುದಾರರಾದ ಸಂತೋಷ ಹವಾಲ್ದಾರ್ ಮನೆಯಲ್ಲಿ ಕೋಣಕ್ಕೆ ಪೂಜೆ ಸಲ್ಲಿಸಿ, ಎಣ್ಣೆ ಹಚ್ಚುವ ಸಂಪ್ರದಾಯವನ್ನು ವಿಧಿವತ್ತಾಗಿ ನೆರವೇರಿತು.
ನಂತರ ಬುಸಾರ ಲಕ್ಷ್ಮೀ ಮಂದಿರ, ಹಕ್ಕುದಾರರು ಹಾಗೂ ಖಾತೆದಾರ ಗೌಡರ ಮನೆ, ಶ್ರೀ ಶಂಕರಲಿಂಗ ದೇವಸ್ಥಾನ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕೋಣವನ್ನು ಮೆರವಣಿಗೆಯೊಂದಿಗೆ ಒಕ್ಕೊರಲಿನಿಂದ
ಶ್ರೀ ಮಹಾಲಕ್ಷ್ಮಿ ದೇವತೆಗೆ ಜೈಕಾರ ಕೂಗುತ್ತಾ, ವಾದ್ಯಮೇಳದೊಂದೊಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರದಲ್ಲಿ ಕರೆತರಲಾಯಿತು.
ನಂತರ ಜಾತ್ರೆಯ ಸೂತ್ರಧಾರ ದಿಲೀಪ ಅಸೂದೆ ಅವರು ಚೌಕಾ ಹೊಯ್ದು ಗಾಯರಾಣಿ ಹಾಕುವ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಿ ಕೋಣಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಟ್ಟಾಭಿಷೇಕ ಸೇರಿದಂತೆ ಎಲ್ಲಾ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿ, ಸಂಪ್ರದಾಯದಂತೆ ಕೋಣವನ್ನು ಬಿಡಲಾಯಿತು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಶಿರಕೊಳಿ, ಕಾರ್ಯಾಧ್ಯಕ್ಷ ಸುನೀಲ ಪರ್ವತರಾವ, ಉಪಾಧ್ಯಕ್ಷ ಅಮರ ನಲವಡೆ, ಕಾರ್ಯದರ್ಶಿ ಬಸನಗೌಡ ಪಾಟೀಲ, ಸಹಕಾರ್ಯದರ್ಶಿ ರಾವಸಾಹೇಬ ದೇಸಾಯಿ, ಹಕ್ಕುದಾರರಾದ ಕುನಾಲ ಪಾಟೀಲ, ನಿಕೇತ್ ಕುಲಕರ್ಣಿ, ಬಸವಣ್ಣಪ್ಪ ಕರ್ದೇಗೌಡ, ಗಿರೀಶ ಕುಲಕರ್ಣಿ, ಅಪ್ಪಾಸಾಹೇಬ ಶೆಟ್ಟಿಮನಿ, ಮುಖಂಡರಾದ ಶಿವಾನಂದ ಮುಡಶಿ, ಗಜಾನನ ಕ್ವಳ್ಳಿ, ಸಂಜಯ ಶಿರಕೋಳಿ, ಶ್ರೀಕಾಂತ ಹತನೂರಿ, ಅಜಿತ ಕರಜಗಿ, ವಿನೋದ ನಾಯಿಕ, ರೋಹನ ನೇಸರಿ, ಆನಂದ ಸಂಸುದ್ದಿ, ಸುಭಾಷ ಕಾಸರಕರ, ಚಿದಾನಂದ ಕರದನ್ನವರ, ಕುಮಾರ ಬಸ್ತವಾಡಿ, ಉಮೇಶ ಕಾಂಬಳೆ, ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.