LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗಾಂಜ ಕಿಂಗ್ ಪಿನ್ ದೌಲ ಬಂಧನ ಸಮ್ಮತಿಸಿದ ಸಲಹಾ ಸಮಿತಿ

ಬಳ್ಳಾರಿ:ಮೇ,18 ಎನ್.ಡಿ.ಪಿ.ಎಸ್ ಪ್ರಕರಣಗಳ ಆರೋಪಿ ಡಿ.ದೌಲ ಅಲಿಯಾಸ್ ಎಸ್.ದೌಲನನ್ನು ಸೆರೆಮನೆಯಲ್ಲಿಡಲು ಆದೇಶಿಸಿದ ಆದೇಶಕ್ಕೆ ಸಲಹಾ ಸಮ್ಮತಿಯಿಂದ ಅನುಮೋದನೆ ದೊರೆತಿದೆಂದು ಎಸ್ಪಿ ಅವರ ಪತ್ರಿಕಾ ಪ್ರಕಟಣೆ ತಿಳಿಸಿದೆ.
ನಗರದ ರಾಣಿತೋಟದಡಿ. ದೌಲ ಅಲಿಯಾಸ್ ಎಸ್. ದೌಲಾ ಅಲಿಯಾಸ್ ಮೆಹಬೂಬ್ ದೌಲ (40) ಈತನು ಬಳ್ಳಾರಿ ಜಿಲ್ಲೆ ಒಳಗೊಂಡಂತೆ ರಾಜ್ಯದ್ಯಾಂತ ವಿವಿಧ ಜಿಲ್ಲೆಗಳಲ್ಲಿ ಮಾದಕ ಪದಾರ್ಥಗಳ ಸಂಗ್ರಹಣೆ, ಸಾಗಟ ಹಾಗೂ ಮಾರಟ ಕೆಲಸದಲ್ಲಿ ತೊಡಗಿಕೊಂಡಿದ್ದನು.
ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ 21 ಪ್ರಕರಣಗಳು ದಾಖಲಾಗಿದ್ದವು. ನಿರಂತರವಾಗಿ ಈತನು ಮಾದಕ ದ್ರವ್ಯ ಸಾಗಣೆ ಮತ್ತು ಮಾರಟದಲ್ಲಿ ತೊಡಗುವ ಮೂಲಕ ಸಾಮಾಜದ ಸ್ವಾಸ್ಥ್ಯವನ್ನು ಹದಗಡೆಸುತ್ತಿದ್ದನು. ಅದಕ್ಕಾಗಿ ಸಮಾಜದ ಸ್ವಾಸ್ಥ್ಯ ಕಾಪಡುವ ಉದ್ದೇಶದಿಂದ ಕಾಯ್ದೆಯನ್ವಯ ಐಜಿಪಿ ಬಳ್ಳಾರಿರವರಿಗೆ ದೌಲನ ಬಂಧನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಐಜಿಪಿ ಹರ್ಷ ಅವರು . ದೌಲನನ್ನು ಒಂದು ವರ್ಷದವರೆಗೆ ಬಂಧನಲ್ಲಿರಿಸಲು ಆದೇಶಿಸಿದ್ದರು.
ಈ ಪ್ರಕರಣವು ಉಚ್ಚ ನ್ಯಾಯಾಲಯದ ನ್ಯಾಯಧೀಶರುಗಳನ್ನು ಒಳಗೊಂಡ ಸಲಹಾ ಸಮಿತಿ ಯಲ್ಲಿ ವಿಚಾರಣೆ ನಡೆದಿತ್ತು. ಎಸ್ಪಿ. ಡ. ಸುಮನ್ ಡಿ.ಪೆನ್ನೇಕರ್, ಹಾಗೂ ಟಿ.ಎಸ್ ಪಾಟೀಲ್, ಹಿರಿಯ ಕಾನೂನು ಸಲಹೆಗಾರರು ಸರ್ಕಾರದ ಪರವಾಗಿ ಸಮಿಯಲ್ಲಿ ವಾದಿಸಿದ್ದರು. ಸಮಿತಿಯ ದೌಲನನ್ನು 12.02.2027 ರ ವರೆಗೆ ಬಂಧನದಲ್ಲಿರಿಸಲು ಸಮ್ಮತಿಸಿದೆ. ಸಧ್ಯ ದೌಲ ಬಳ್ಳಾರಿ ಕೇಂದ್ರ ಕಾರಗೃಹದಲ್ಲಿದ್ದಾನೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್