ಬಳ್ಳಾರಿ,ಜು.27:.. ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾದ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ. ರಾಮಾಂಜಿನಿ ಅವರು ಶನಿವಾರ ಸಕ್ರಿಯವಾಗಿ ಭಾಗವಹಿಸಿದ್ದರು.
ನಗರದ ವಾರ್ಡ್ ಸಂಖ್ಯೆ ೩೪ರ ಬೂತ್ ಸಂಖ್ಯೆ ೧೧ರಲ್ಲಿ ಮನೆ ಮನೆಗೆ ತೆರಳಿದ ಅವರು, ತಮ್ಮ ಮತಗಟ್ಟೆ ವ್ಯಾಪ್ತಿಯ ಸುಮಾರು ೨೦ಕ್ಕೂ ಹೆಚ್ಚು ಕುಟುಂಬಗಳನ್ನು ಭೇಟಿಯಾದರು. ಈ ವೇಳೆ ಮತದಾರರ ಎನ್ಯೂಮರೇಷನ್ (ಮತದಾರರ ಪಟ್ಟಿ ಸಂಗ್ರಹ) ಪತ್ರಗಳನ್ನು ಪರಿಶೀಲಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಕೆ. ರಾಮಾಂಜಿನಿ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸಿ, ಅಗತ್ಯ ಮಾಹಿತಿಯನ್ನು ಹಂಚಿಕೊAಡರು.
ಅಭಿಯಾನದಲ್ಲಿ ಬಿ.ಎಲ್.ಎ-೨ ಸಿ. ಮಲ್ಲಿಕಾರ್ಜುನ, ಪ್ರಮುಖ ಮುಖಂಡರಾದ ಪ್ರತಾಪ್ ರೆಡ್ಡಿ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ, ಕ್ರಾಂತಿ ರಘು ಸೇರಿದಂತೆ ಹಲವು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.