LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಿರಿ ಡಯಾಗ್ನಸ್ಟಿಕ್ ಲ್ಯಾಬ್ ನ ಉಚಿತ ತಪಾಸಣೆಯಿಂದ 11 ಜನರಲ್ಲಿನ ಕ್ಯಾನ್ಸರ್ ಪತ್ತೆ





ಬಳ್ಳಾರಿ, ಫೆ.19:..ನಗರದ ಸಿರಿ ಡಯಾಗ್ನಸ್ಟಿಕ್ ಲ್ಯಾಬ್ ನಿಂದ ಕಳೆದ ಒಂದು ವರೆ ತಿಂಗಳಲ್ಲಿ ಬಳ್ಳಾರಿ, ಹೊಸಪೇಟೆ ಮತ್ತು ಗಂಗಾವತಿ ಪ್ರದೇಶಗಳಲ್ಲಿ ನಡೆಸಲಾದ ಉಚಿತ ಗರ್ಭಕೋಶ ಕ್ಯಾನ್ಸರ್ (Cervical Cancer) ತಪಾಸಣಾ ಶಿಬಿರದಲ್ಲಿ 537 ಜನರ ಪರೀಕ್ಷೆ ನಡೆಸಿ ಅವರಲ್ಲಿ 11 ಜನರಿಗೆ ಸೋಂಕು ಇರುವುದನ್ನು ಪತ್ತೆ ಹಚ್ಚಿರುವುದಾಗಿ ಲ್ಯಾಬ್ ನ ಪ್ರಕಟಣೆ ತಿಳಿಸಿದೆ.

ಭಾರತದಲ್ಲಿ ಮಹಿಳೆಯರಲ್ಲಿ ಕಾಣಿಸುವ ಕ್ಯಾನ್ಸರ್ಗಳಲ್ಲಿ ಗರ್ಭಕೋಶ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಅರಿವಿನ ಕೊರತೆ, ತಪಾಸಣೆ ಸೌಲಭ್ಯಗಳ ಅಭಾವ ಹಾಗೂ ಆರ್ಥಿಕ ಅಡಚಣೆಗಳ ಕಾರಣದಿಂದ ಅನೇಕ ಪ್ರಕರಣಗಳು ಮುಂದುವರೆದು ಕೊನೆ ಹಂತದಲ್ಲಿ ಮಾತ್ರ ಪತ್ತೆಯಾಗುತ್ತಿವೆ.

ಹ್ಯುಮನ್ ಪ್ಯಾಪಿಲೋಮಾ ವೈರಸ್ (HPV) ನ ನಿರಂತರ ಸೋಂಕು ಗರ್ಭಕೋಶ ಕ್ಯಾನ್ಸರ್ನ ಪ್ರಮುಖ ಕಾರಣವಾಗಿದೆ. ಆದರೆ ನಿಯಮಿತ ತಪಾಸಣೆಯ ಮೂಲಕ ಇದು ಸಂಪೂರ್ಣವಾಗಿ ತಡೆಗಟ್ಟಬಹುದಾದ ಹಾಗೂ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ಆಗಿದೆ.

ಇದನ್ನು ಮನಗಂಡು, ಸಿರಿ ಡಯಾಗೋಸ್ಟಿಕ್ ಲ್ಯಾಬ್ ಫೆಬ್ರವರಿ 4,2026 ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ 45 ದಿನಗಳ ಉಚಿತ ಸಾರ್ವಜನಿಕ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿತು.

ಸಾಮಾನ್ಯವಾಗಿ ಈ ಪರೀಕ್ಷೆಗಳ ವೆಚ್ಚ 1500-22000ರ ನಡುವೆ ಇರುತ್ತದೆ. ವೆಚ್ಚದ ಅಡತಡೆಗಳನ್ನು ನಿವಾರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಜೀವ ರಕ್ಷಕ ತಪಾಸಣೆಯನ್ನು ಪಡೆಯುವಂತೆ ಮಾಡಲಾಯಿತು.

ಸೋಂಕು ಪತ್ತೆಯಾದ ಎಲ್ಲಾ ಮಹಿಳೆಯರು ಯಾವುದೇ ಲಕ್ಷಣಗಳಿಲ್ಲದವರಾಗಿದ್ದರು. ತಪಾಸಣೆ ಇಲ್ಲದಿದ್ದರೆ ಈ ಪ್ರಕರಣಗಳು ಪೂರ್ವಕ್ಯಾನ್ಸರ್ ಅಥವಾ ಕ್ಯಾನ್ಸರ್ ಹಂತಕ್ಕೆ ತಲುಪುವವರೆಗೆ ಪತ್ತೆಯಾಗದೇ ಉಳಿಯಬಹುದಿತ್ತು.

"ಶಿಬಿರದ ವೇಳೆ ಪಾಸಿಟಿವ್ ಎಂದು ಪತ್ತೆಯಾದ ಎಲ್ಲಾ ಮಹಿಳೆಯರಿಗೆ ವೈಯಕ್ತಿಕ ಸಮಾಲೋಚನೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅರಿವು ಮೂಡಿಸಲಾಗಿದೆ. ತಜ್ಞರ ಬಳಿ ರೆಫರಲ್, ಹೆಚ್ಚಿನ ತಪಾಸಣೆ, ನಿಯಮಿತ ಫಾಲೋ-ಅಪ್ ಮತ್ತು ತಡೆಗಟ್ಟುವ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ತಪಾಸಣಾ ಶಿಬಿರಗಳು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ತಿಳಿಸಿದೆ




Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ