LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಚೈತ್ರ ಸಂಸ್ಕೃತ ಶಿಬಿರದಲ್ಲಿ ಪ್ರಜ್ವಲಿಸಿದ ಮಕ್ಕಳು







ಬಳ್ಳಾರಿ, ಏ.15:..ಶ್ರೀ ಸನಾತನ ವೀರಶೈವ ಗುರುಕುಲಮಠ ಟ್ರಸ್ಟ್ ಹಾಗೂ ಸಂಸ್ಕೃತ ಭಾರತಿ ಕರ್ನಾಟಕ ಉತ್ತರದಿಂದ  ಮಕ್ಕಳಿಗಾಗಿ ಕಳೆದ ಹತ್ತು ತಿಂಗಳಿಂದ  ಈ ವರ್ಷದ   *ಚೈತ್ರ ಸಂಸ್ಕೃತ* ಶಿಬಿರದ ಸಮಾರೋಪ ಸಮಾರಂಭ ನಿನ್ನೆ ಸಂಜೆ  ರೇಣುಕಾಚಾರ್ಯ ನಗರದ  ಸನಾತನ ಗುರುಕುಲ ಮಠದ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಸಾನಿದ್ಯವನ್ನು ವೇದಮೂರ್ತಿ ಡಾ. ಜೆ.ಯಂ ಪಂಪಾಪತಿ ಶಾಸ್ತ್ರಿಗಳು ಸಂಸ್ಥಾಪಕ ಅಧ್ಯಕ್ಷರು ಶ್ರೀ ಸನಾತನ ವೀರಶೈವ ಗುರುಕುಲ ಮಠ ಟ್ರಸ್ಟ್ ಇವರು ವಹಿಸಿದ್ದರು

ಶಿಬಿರದ ಮಾರ್ಗದರ್ಶಕರಲ್ಲಿ ಒಬ್ವರಾಗಿದ್ದ ನಿವೃತ್ತ ದೈಹಿಕ ಶಿಕ್ಷಕ  ಸಿದ್ದಲಿಂಗ ಸ್ವಾಮಿ ಮಾತನಾಡಿ. ಮಕ್ಕಳಿಗಾಗಿ ಕಥೆಯ ಮೂಲಕ ಸಂಸ್ಕೃತ, ಸಂಸ್ಕಾರ, ಸಂಸ್ಕೃತಿಯ ವಿಚಾರದ ಬಗ್ಗೆ ತಿಳಿಸುವುದರ ಜೊತೆಗೆ ದರೋಜಿ ಕೆರೆ, ಗೋಶಾಲೆ ವೀಕ್ಷಣೆ ಮಾಡಿಸಲಾಗಿದೆ.  ಇದೊಂದು ಉತ್ತಮ ಶಿಬಿರ ಎಂದರು.

ವೀರಶೈವ ಸಮಾಜದ ಮುಖಂಡ ಕೆ.ಎಂ.ಮಹೇಶ್ವರ ಸ್ವಾಮಿ ಮಾತನಾಡಿ, ಯೋಗೇಶ್ ಅವರು ಇಂತಹ ಉತ್ತಮವಾದ ಶಿಬಿರವನ್ನು ಮಕ್ಕಳಿಗೆ ಆಯೋಜಿಸಿರುವುದು ಶ್ಲಾಘನೀಯ ಶಿಕ್ಷಣ ಕಲಿತವ ಭ್ರಷ್ಟನಾಗಬಹುದು. ಸಂಸ್ಕಾರ ಕಲಿತವ ಮಾತ್ರ ಭ್ರಷ್ಟನಾಗಲಾರ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ, ಕಲೆ, ಸಂಸ್ಕೃತಿ ಜೊತೆಗೆ ಮಕ್ಕಳು ಸಂಸ್ಕೃತ ಭಾಷೆಯನ್ನು ಕಲಿಯುವ   ಹತ್ತ  ದಿನಗಳ ಶಿಬಿರ ಸಾರ್ಥಕತೆಯಿಂದ ಕೂಡಿದೆಂದರು.

ಮಕ್ಕಳು ತಾವು ಹತ್ತು ದಿನಗಳ ಕಾಲ ಕಲಿತ ಸಂಸ್ಕೃತದಲ್ಲಿ ಹಾಡು, ಶ್ಲೋಕ, ಸಂಖ್ಯೆ ಜೊತೆಗೆ ಕಿರು ನಾಟಕಗಳ ಪ್ರದರ್ಶನ ಮಾಡಿ ಪೋಷಕರ ಗಮನ ಸೆಳೆದರು.ಸಾಧನಾ ಯೋಗ ಕೇಂದ್ರದಿಂದ ತರಬೇತಿ ಪಡೆದ  ಮಕ್ಕಳು ಯೋಗ ಪ್ರದರ್ಶನ ಮಾಡಿದರು.

ಸಮಾರಂಭದಲ್ಲಿ ಪಾಲ್ತೂರು ಶ್ರೀಗಳು, ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ, ಸಿಮೆಂಟ್ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ,  ಸಿದ್ಧಾಂತ ಶಿಖಾಮಣಿ ಬೋಧಕಿ ಅನುರಾಧ ಕೆ. ಎಂ., ಸಂಸ್ಕೃತ ಶಿಕ್ಷಕಿ ಚೆನ್ನಮ್ಮ, ಎಂ ಚಂದ್ರ ಮೌಳಿ, ಜೋಳದರಾಶಿ ಬಸವರಾಜ್, ಎರ್ರಿಸ್ವಾಮಿ, ಶಿವೇಶ್ವರಗೌಡ, ಶಿವಾನಂದ ಸ್ವಾಮಿ ಬೆಳಗಲ್, ಎಣ್ಣೆ ಎರ್ರಿಸ್ವಾಮಿ, ಓಂಕಾರಸ್ವಾಮಿ ಮಿಂಚೇರಿ, ಮೊದಲಾದವರು  ಪಾಲ್ಗೊಂಡಿದ್ದರು.

ಮಹಾಂತೇಶ ಮೂರ್ತಿ ಕೆ.ಎಂ. ನಿರೂಪಣೆ ಮಾಡಿದರು.ವೈಷ್ಣವಿ ಪ್ರಾರ್ಥನೆ ಮಾಡಿದರು. ಶಿಕ್ಷಕ  ಎಸ್.ಎಂ. ಸಿದ್ದೇಶ್ವರ ವಂದನಾರ್ಪಣೆ ಮಾಡಿದರು.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್