LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕಾಂಗ್ರೆಸ್ ಸರಕಾರ ಹಿಂದು ಸಮಾಜದ ಮೇಲೆ ಅನ್ಯಾಯ ಮಾಡುತ್ತಿದೆ : ಬಸನಗೌಡ ಪಾಟೀಲ

ಇಂಡಿ : ಕಾಂಗ್ರೆಸ್ ಸರಕಾರ ಮುಸ್ಲಿಂರನ್ನು ತುಷ್ಠಿಕರಿಣ ಮಾಡುತ್ತಿದ್ದು ಹಿಂದು ಸಮಾಜದ ಮೇಲೆ ಅನ್ಯಾಯ ಮಾಡುತ್ತಿದೆ. ೨೦೨೮ ಕ್ಕೆ ಹಿಂದು ಸಮಾಜ ಬೆಂಬಲಿತ ಪಕ್ಷ ಅಧಿಕಾರಕ್ಕೆ ಬರಲಿದ್ದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ   ಜೆಸಿಬಿ ಆಡಳಿತ ಸದ್ದು ಮಾಡಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲರು ಹೇಳಿದರು. 
 ತಾಲೂಕಿನ ಸುಕ್ಷೇತ್ರ ಬೊಳೆಗಾಂವ ಗ್ರಾಮದ ಶ್ರೀ ಮಾರುತೇಶ್ವರ ದೇವರ ನೂತನ ದೇವಸ್ಥಾನದ ವಾಸ್ತು ಶಾಂತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದರು. 
ರಾಜ್ಯ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ದಿ ಮಾಡದೇ ಕಾಲಹರಣ ಮಾಡುತ್ತಿದೆ ಎಂದರು. ಇಂಡಿ ಮತಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಜನರ ಭಾವನೆ ಬೇರೆ ಕಡೆ ತಿರುಗಿಸಲು ಇಂಡಿ ಜಿಲ್ಲೆ ಮಾಡುವದಾಗಿ ಹೇಳುತ್ತಿದ್ದಾರೆ. ಮೊದಲು ಅಭಿವೃದ್ದಿ  ರಸ್ತೆ ಮಾಡಿ ನಂತರ ಜಿಲ್ಲೆ ಮಾಡಿ ಎಂದರು. 
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದರು. ಪಂಚಮಸಾಲಿ ಸಮಾಜದ ಮಿಸಲಾತಿಗಾಗಿ ಸಮಾಜದ ಒಳತಿಗಾಗಿ ಯಾವದೇ ಹೋರಾಟಕ್ಕೂ ಸಿದ್ದ ಎಂದರು. ಬೋಳೆಗಾಂವ ಗ್ರಾಮದಲ್ಲಿ ಮೂರು ಕೋಟಿ ರೂ ವೆಚ್ಚದಲ್ಲಿ ಮಾರುತೇಶ್ವರ ನೂತನ ದೇವಸ್ಥಾನ ಕಟ್ಟಿರುವದು ಇಡಿ ರಾಜ್ಯಕ್ಕೆ  ಮಾದರಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದರು..
ಶಿಕ್ಷಕ ಆನಂದ ಮೊರೆ, ಬಿ.ಟಿ.ತಳವಾರ ಮಾತನಾಡಿದರು.
 
ಇಂಡಿ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಚ್.ಬಿರಾದಾರ, ಜಗದೀಶ ಕ್ಷತ್ರಿ  ವೇದಿಕಯ ಮೇಲಿದ್ದರು.
ಈರಣ್ಣ ಕಪ್ಪೆನವರ, ಅನೀಲ ಹೂಗಾರ, ಗಣಪತಿ ನಾಗಶೆಟ್ಟಿ, ಪರಮೇಶ್ವರ ಬಿರಾದಾರ, ಭೀಮರಾಯ ಹೂಣಚ್ಯಾಳ, ಸಂತೋಷ ಗೊಳ್ಳಗಿ ಮತ್ತಿತರಿದ್ದರು. 
ಇದಕ್ಕೂ ಮುಂಚೆ ಬಸನಗೌಡರಿಗೆ ಜೆಸಿಬಿ ಮೂಲಕ ಮಾಲಾರ್ಪಣೆ ಮಾಡಿ ನೂರಾರು ದ್ವಿ ಚಕ್ರ ವಾಹನದೊಂದಿಗೆ ಭಾರಿ ಮೆರವಣೆಗೆ ಮಾಡಲಾಯಿತು. 
ಫೋಟೊ ಕ್ಯಾಪ್ಸನ್ ೨೭ ಇಂಡಿ ೦೪ : ತಾಲೂಕಿನ ಸುಕ್ಷೇತ್ರ ಬೊಳೆಗಾಂವ ಗ್ರಾಮದ ಶ್ರೀ ಮಾರುತೇಶ್ವರ ದೇವರ ನೂತನ ದೇವಸ್ಥಾನದ ವಾಸ್ತು ಶಾಂತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಶಾಸಕ ಬಸನಗೌಡ ಪಾಟೀಲರು ಮಾತನಾಡಿದರು. 

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್