ತಾಳಿಕೋಟೆ,ಜು,೨೭ : ಪಟ್ಟಣದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಅಂಗವಾಗಿ ಪ್ರತಿನಿತ್ಯ ವಿಶೇಷವಾದ ಪ್ರಸಾದ ರೂಪದಲ್ಲಿ ಭಕ್ತಾಧಿಗಳಿಗಾಗಿ ಪಕ್ವಾನ್ ಭೋಜನ ತಯಾರಿಸಲಾಗುತ್ತಿದ್ದು ಅದರಂತೆ ಈ ಭಾರಿ ರವಿವಾರ ಮಹಾ ಪ್ರಸಾದದಿನದಂದು ಭಕ್ತಾಧಿಗಳು ಹಾಲು ಹುಗ್ಗಿ, ರೈಸ್, ಬೊಂದೆ, ಶೇಂಗಾ ಹೋಳಿಗೆ, ಖಡಕ್ ರೊಟ್ಟಿ ಸಾಂಬಾರ ಸವಿದರು.
ಸುಮಾರು ೯ ದಿನಗಳಕಾಲ ಜರುಗಲಿರುವ ಈ ಜಾತ್ರೋತ್ವಕ್ಕೆ ಆಗಮಿಸುವ ಭಕ್ತರಿಗೆ ಪ್ರತಿವರ್ಷವು ಶ್ರೀಮಠದಿಂದ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು ಪ್ರತಿನಿತ್ಯ ೨೦ ಸಾವಿರ ಜನಕ್ಕೆ ಸಾಲುವಷ್ಟು ಫಕ್ವಾನ್ ಭೋಜನೆಯನ್ನು ತಯಾರಿಸಿ ನೀಡಲಾಗುತ್ತಿದೆ. ರವಿವಾರರಂದು ೨೦ ಕ್ವಿಂಟಲ್ ಹಾಲು ಹುಗ್ಗಿ, ೨೫ ಕ್ವಿಂಟಲ್ ರೈಸ್ನ್ನು ಸಿದ್ದಪಡಿಸಿ ಸುಮಾರು ೩೦ ಸಾವಿರ ಭಕ್ತಾಧಿಗಳಿಗೆ ಪ್ರಸಾದಕ್ಕೆ ಸಾಲುವಷ್ಟು ಸಿದ್ದಪಡಿಸಿ ಭಕ್ತರ ಅಪೇಕ್ಷೆಯಂತೆ ಭಕ್ತಾಧಿಗಳಿಗೆ ಸಿದ್ದಲಿಂಗಶ್ರೀಗಳು ಉಣಬಡಿಸಿದರು.
---
ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಚಲಿತ ಫಕ್ವಾನ್ ಭೋಜನದಲ್ಲಿ ಹಾಲು ಹುಗ್ಗಿ ಎಲ್ಲರೂ ಮೆಚ್ಚುವಂತಹದ್ದು ಅಂತಹ ಹಾಲು ಹುಗ್ಗಿ ಭಕ್ತರ ಅಪೇಕ್ಷೆಯಂತೆ ಸಿದ್ದಪಡಿಸಿ ಶ್ರೀ ಖಾಸ್ಗತನ ಪ್ರಸಾದ ರೂಪದಲ್ಲಿ ನೀಡಲಾಗಿದೆ ಶ್ರೀಮಠಕ್ಕೆ ಆಗಮಿಸುತ್ತಿರುವ ಭಕ್ತರೇ ಎಲ್ಲವನ್ನು ಸತ್ಯಂತ ಸಂತಸದಿಂದ ನೋಡಿಕೊಳ್ಳುತ್ತಿದ್ದಾರೆ ಭಕ್ತರಿಂದ ಶ್ರೀಮಠವು ಪ್ರೀತಿಯನ್ನು ಮಾತ್ರ ಬಯಸಿದೆ ಯಾಕೆಂದರೆ ಶ್ರೀಮಠದ ಆಸ್ತಿ ಭಕ್ತರೇ ಆಗಿದ್ದಾರೆ.