LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕಲಿಕೆಯೊಂದಿಗೆ ಗಳಿಕೆ ನವೀನ ಶಿಕ್ಷಣ ಮಾದರಿ  - ನಾಗೇಶ್

ಬಳ್ಳಾರಿ ಫೆ, 11-   ಕಲಿಕೆಯೊಂದಿಗೆ ಗಳಿಕೆ ಒಂದು ನವೀನ ಉನ್ನತ ಶಿಕ್ಷಣ ಮಾದರಿಯಾಗಿದ್ದು ಸಾಂಪ್ರದಾಯಿಕ ಪದವಿಯೊಂದಿಗೆ ಕೈಗಾರಿಕಾ ತರಬೇತಿಯನ್ನು ಸಂಯೋಜಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾದ ಯೋಜನೆಯಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ Atleast  ಆರ್.ನಾಗೇಶ್ ಅಭಿಪ್ರಾಯಪಟ್ಟರು

ಅವರು  ನಗರದ ಸರಳಾದೇವಿ  ಕಾಲೇಜಿನ ಸಭಾಂಗಣದಲ್ಲಿ ರೂಸಾ ಅನುದಾನದಡಿಯಲ್ಲಿ ವಾಣಿಜ್ಯಶಾಸ್ತ್ರ  ವಿಭಾಗದಿಂದ ಆಯೋಜಿಸಿದ್ದ ‘ ಕಲಿಕೆ ಮತ್ತು ಗಳಿಕೆ, ಅನುಷ್ಠಾನ, ಅಭಿವೃದ್ಧಿ ಮತ್ತು ಸವಾಲುಗಳು ‘ ವಿಶೇಷ

ಸಭೆಯನ್ನು ಉದ್ಘಾಟಸಿ ಮಾತನಾಡಿದರು.

      ವಿದ್ಯಾರ್ಥಿಗಳಿಗೆ ಓದುತ್ತಿರುವಾಗಲೇ ಕೆಲಸದ ಅನುಭವ ಮತ್ತು ಗಳಿಕೆಯ ಅವಕಾಶವನ್ನು ಕಲ್ಪಿಸಿ ಅವರಲ್ಲಿ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ಒದಗಿಸುತ್ತದೆ ಎಂದರು.

   ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಜಿ.ಪ್ರಹ್ಲಾದ್ ಚೌದ್ರಿ ಯುವಸಮುದಾಯ ಶಿಕ್ಷಣದ ಇಂತಹ ಯೋಜನೆಗಳ ಲಾಭವನ್ನು ಸಮರ್ಪಕವಾಗಿ ಪಡೆಯಬೇಕೆಂದರು.

   ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಾಥ್ ಗಟ್ಟು,ಹರೀಶ್ ವಿ, ಉಜ್ವಲ್ ಕಿರಣ್,ಸಮೀರ್ ನರಸಾಪುರ, ಜೈನ ಎಂ ಹರನ್, ಡಾ.ಜಿಲಾನ್ ಭಾಷಾ, ಅರ್ಜುನ್ ಶತ್ರುಂಜಯ್ ಮಾತನಾಡಿದರು.

 ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಡಾ. ಕನ್ಯಾಕುಮಾರಿ ಉಡಗಿ, ಪ್ರಾಧ್ಯಾಪಕರಾದ ಡಾ. ಗುರುಬಸಪ್ಪ. ,ಡಾ.ಮಮತಾ,  ಅತಿಥಿ ಉಪನ್ಯಾಸಕರಾದ ಗಂಗಾಧರ್,ಚೈತ್ರ ಹಾಗೂ ಬಳ್ಳಾರಿ, ದಾವಣಗೆರೆ, ಕೊಪ್ಪಳ ವಿವಿಯ ಸಂಲಗ್ನತೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್