LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಧಾರವಾಡಕ್ಕೆ ಪ್ರವೇಶಿಸಿದ ಹೋಮ್‌ಲೇನ್


ಧಾರವಾಡ, ಏಪ್ರಿಲ್ ೨೩, ೨೦೨೬: ಭಾರತದ ಪ್ರಮುಖ ತಂತ್ರಜ್ಞಾನ ಮತ್ತು ಎಐ ಆಧಾರಿತ ಗೃಹಾಲಂಕಾರ ಬ್ರ್ಯಾಂಡ್ ಆದ ಹೋಮ್‌ಲೇನ್, ಧಾರವಾಡದ ವಸತಿ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ನಗರದಲ್ಲಿ ತನ್ನ ಮೊದಲ ಸ್ಟುಡಿಯೋ ಪ್ರಾರಂಭಿಸಿದೆ. 

ಈ ಪ್ರಾರಂಭದೊಂದಿಗೆ ಹೋಮ್‌ಲೇನ್ ತನ್ನ ತಂತ್ರಜ್ಞಾನ ಆಧಾರಿತ ಸಮಗ್ರ ಇಂಟೀರಿಯರ್ ಪರಿಹಾರಗಳನ್ನು ಈ ಪ್ರದೇಶಕ್ಕೆ ಪರಿಚಯಿಸಿದೆ. ಇದು ಬುದ್ಧಿವಂತ ವಿನ್ಯಾಸ, ಪಾರದರ್ಶಕ ಬೆಲೆ ಮತ್ತು ನಿಖರವಾದ ಸಮಯದ ಮಿತಿ ಒಳಗೊಂಡಿದ್ದು, ತನ್ನ ವಿಶ್ವಾಸಾರ್ಹ ೪೫-ದಿನಗಳ ಡೆಲಿವರಿ ಗ್ಯಾರಂಟಿಯ ಬೆಂಬಲ ಹೊಂದಿದೆ.


ಈ ಸ್ಟುಡಿಯೋ ಧಾರವಾಡದ ಮಾಳಮಡ್ಡಿಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿದ್ದು, ಇದನ್ನು ಆಕಾಶ್ ಪಿ. ಬೇಲೂರು ಮತ್ತು ರಾಘವೇಂದ್ರ ಎಸ್. ಕಲ್ಲವಡ್ಡರ್ ನೇತೃತ್ವದ ’ಕಾಲಿಕಾ ಕನ್‌ಸ್ಟ್ರಕ್ಷನ್ ಅಂಡ್ ಇಂಟೀರಿಯರ್ಸ್’ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗಿದೆ. ಈ ಪ್ರಾರಂಭವು ಹೋಮ್‌ಲೇನ್‌ನ ವ್ಯಾಪಕ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿದ್ದು, ಈ ವರ್ಷ ಭಾರತದಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ೧೦೦ ಹೊಸ ಎಫ್‌ಓಎಫ್‌ಓ ಸ್ಟುಡಿಯೋಗಳನ್ನು ತೆರೆಯುವ ಯೋಜನೆಯನ್ನು ಇದು ಒಳಗೊಂಡಿದೆ. ೧,೩೦೦ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಸ್ಟುಡಿಯೋವನ್ನು ತನ್ಮಯಗೊಳಿಸುವ ಅನುಭವ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿದೆ.

ಇಲ್ಲಿ ಗ್ರಾಹಕರು ಮಾಡ್ಯುಲರ್ ಕಿಚನ್‌ಗಳು, ವಾರ್ಡ್‌ರೋಬ್‌ಗಳು ಮತ್ತು ಸಂಪೂರ್ಣ ಮನೆಯ ವಿನ್ಯಾಸಗಳನ್ನು ಆರಿಸಿಕೊಳ್ಳಬಹುದು. ವಿನ್ಯಾಸ ಮತ್ತು ಅನುಷ್ಠಾನಕ್ಕೆ ಒಂದೇ ಸೂರಿನಡಿ ಪರಿಹಾರ ನೀಡುವ ಹೋಮ್‌ಲೇನ್, ಮನೆಮಾಲೀಕರಿಗೆ ಯೋಜನೆಯಿಂದ ವಿತರಣೆಯವರೆಗೆ ಸುಗಮವಾಗಿ ಸಾಗಲು ಸಹಾಯ ಮಾಡುತ್ತದೆ. ಈ ಅನುಭವದ ಪ್ರಮುಖ ಅಂಶ ಸ್ಪೇಸ್‌ಕ್ರಾಫ್ಟ್ ಆಗಿದೆ. ಇದು ಹೋಮ್‌ಲೇನ್‌ನ ಸ್ವಂತ ಎಐ -ತಂತ್ರಜ್ಞಾನದ ಪ್ಲಾಟ್‌ಫಾರ್ಮ್ ಆಗಿದ್ದು, ಇದು ನೈಜ-ಸಮಯದ ೩ಡಿ ದೃಶ್ಯೀಕರಣ, ವೇಗವಾದ ಬದಲಾವಣೆಗಳು ಮತ್ತು ವಿನ್ಯಾಸಗಳನ್ನು ನಿಖರವಾಗಿ ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಡುತ್ತದೆ.

ಗ್ರಾಹಕರು ಹೋಮ್‌ಲೇನ್‌ನ ವಿಶಿಷ್ಟ ಕೊಡುಗೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ೪೫ ದಿನಗಳ ಡೆಲಿವರಿ ಗ್ಯಾರಂಟಿ. ಬಿಡಿಭಾಗಗಳು ಅಥವಾ ಸಾಮಗ್ರಿಗಳ ಮೇಲೆ ೧೦ ವರ್ಷಗಳ ವಾರಂಟಿ ಹೋಮ್‌ಲೇನ್ ಸೀಡ್‌ನ ಸಹ-ಸಂಸ್ಥಾಪಕರು ಮತ್ತು ಸಿಒಒ ಆದ ತನುಜ್ ಚೌಧರಿ “ನಮ್ಮ ಧಾರವಾಡ ಸ್ಟುಡಿಯೋದ ಪ್ರಾರಂಭವು ಉದಯೋನ್ಮುಖ ಮಾರುಕಟ್ಟೆಗಳಿಗೆ ವ್ಯವಸ್ಥಿತ ಮತ್ತು ವಿನ್ಯಾಸ-ಆಧಾರಿತ ಇಂಟೀರಿಯರ್ ಸೇವೆಗಳನ್ನು ಪರಿಚಯಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್