LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ದೇಶ ಸುಭಿಕ್ಷೆಯಾಗಿದ್ದರೆ, ನಾವೆಲ್ಲರೂ ನಾವೆಲ್ಲರೂ ಸುರಕ್ಷಿತವಾಗಿರಲು  ಸಾಧ್ಯ - ಮೀನಳ್ಳಿ ತಾಯಣ್ಣ 

ಬಳ್ಳಾರಿ. ಮೇ. 14:.  ದೇಶದ ಜನರ, ದೇಶದ  ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಚಿನ್ನ ಖರೀದಿ ಕುರಿತು ನೀಡಿದ ಹೇಳಿಕೆ ಗೆ, ಕಾಂಗ್ರೆಸ್ ನವರು ರಾಜಕೀಯ ಚಟಕ್ಕಾಗಿ ಮೋದಿ ಅವರ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ, ಮೋದಿ ಅವರು ಏನೇ ತೀರ್ಮಾನ ಕೈಗೊಂಡರೂ ಅದು ದೇಶದ ಜನರ, ಅಭಿವೃದ್ಧಿ ಪೂರಕವಾಗಿಯೇ ಇರಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ಪ್ರಧಾನ ಮಂತ್ರಿ  ಮೋದಿ ಅವರು ತೆಗೆದುಕೊಂಡ ಯಾವುದೇ ನಿರ್ಧಾರ, ಅದು ದೇಶದ ಅಭಿವೃದ್ಧಿಗಾಗಿ ಇರಲಿದೆ, ದೇಶದ ಜನರ ಸುಭಿಕ್ಷೆಗಾಗಿ ಇರಲಿದೆ, ಇದರಲ್ಲಿ ಅನುಮಾನವೇ ಬೇಡ, ಮೋದಿ ಅವರು ತೆಗೆದುಕೊಂಡ ತೀರ್ಮಾನವನ್ನು  ನಾವೆಲ್ಲರೂ ಸ್ವಾಗತಿಸಬೇಕು, ಗೌರವಿಸಬೇಕು. ಈ ಹಿಂದೆ ಕಳೆದ 1967ರಲ್ಲಿ ಇಂದಿರಾ ಗಾಂಧಿ ಅವರು, ಚಿನ್ನ ಖರೀದಿ ಅದಷ್ಟು ಕೈಬಿಡಿ, ರಾಷ್ಟ್ರೀಯ ಶಿಸ್ತು ಎಂದು ಹೇಳಿಕೆ ನೀಡಿ ಮನವಿ ಮಾಡಿದ್ದರು ಎಂಬುದನ್ನು ಕೈ ನಾಯಕರು ಮರೆಯಕೂಡದು. ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ, ಒಂದು ವರ್ಷದ ವರೆಗೆ ಆದಷ್ಟು ಚಿನ್ನ, ಖರೀದಿಸುವುದನ್ನು ನಿಲ್ಲಿಸಿ, ಪೆಟ್ರೋಲ್, ಡೀಸೆಲ್, ಬಳಕೆಯನ್ನು ಕಡಿಮೆ ಮಾಡಿ, ಮೆಟ್ರೋ, ಸಾರ್ವಜನಿಕ ಸಾರಿಗೆ ಬಳಕೆ ಮಾಡಿ, ಅಡುಗೆ ಎಣ್ಣೆಯ ಬಳಕೆ ಕಡಿಮೆ ಮಾಡಿ, ರಾಸಾಯನಿಕ ರಸಗೊಬ್ಬರ ಮೇಲಿನ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ಕೃಷಿಯತ್ತ ಮುನ್ನಡೆಯರಿ, ವಿದೇಶಿ ಬ್ರ್ಯಾಂಡ್ ಉತ್ಪನ್ನಗಳನ್ನು ಕಡಿಮೆ ಮಾಡಿ, ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸಿ, ಕನಿಷ್ಠ 1 ವರ್ಷ  ವಿದೇಶಿ ಪ್ರವಾಸವನ್ನು ತಪ್ಪಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ, ಎಲ್ಲರೂ ದೇಶಕ್ಕಾಗಿ, ದೇಶದ ಜನರಿಗಾಗಿ ಪಾಲಿಸಬೇಕು, ಕಾಂಗ್ರೆಸ್ ನವರ ರಾಜಕೀಯ ಚಟದ ಹೇಳಿಕೆಗೆ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್