LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಾವಯುವ ಕೃಷಿಗೆ ಆದ್ಯತೆ ನೀಡಿ : ಕಾಡಶಿದ್ದೇಶ್ವರ ಸ್ವಾಮೀಜಿ

ಯರಗಟ್ಟಿ: ಅತಿಯಾದ ಗೊಬ್ಬರ,ಕ್ರಿಮಿನಾಶಕ, ಔ?ದ ಬಳಿಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು, ಬರಡು ಭೂಮಿಯಾಗಿ ಮಾರ್ಪಡಾಗುತ್ತದೆ ಪ್ರತಿಯೊಬ್ಬ ರೈತರೂ ಈ ಕುರಿತು ಜಾಗೃತರಾಗವುದು ಅಗತ್ಯವಿದೆ ಎಂದು ಕೆನೇರಿ ಮಠದ ಕಾಡಶಿದ್ಧೇಶ್ವರ ಸ್ವಾಮೀಜಿ ಹೇಳಿದರು,
ಸಮೀಪದ ರೈನಾಪೂರ ಗ್ರಾಮದ ಶ್ರದ್ಧಾನಂದ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಪಯಜ್ಞ ಮತ್ತು ವೇದಾಂತ ಮಹೋತ್ಸವವದ ಮೂರನೇಯ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ರಾಸಾಯನಿಕ ಗೊಬ್ಬರ ಬಳಿಸುವದರಿಂದ ಕ್ಯಾನ್ಸರ್, ರಕ್ತದ, ಒತ್ತಡ. ಸಕ್ಕರೆ, ಇನ್ನೂ ಅನೇಕ ಮಾರಣಾಂತಿಕ ಕಾಯಲೆಗಳು ಉಲ್ಬಣಗೊಳ್ಳುತ್ತವೆ, ರೈತ ಸಮುದಾಯ ಹೆಚ್ಚು ಸಾವಯುವ ಕೃಷಿ ಪದ್ದತಿ ಅನುಸರಿಸಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಮಾಣ ಸಾಧ್ಯವಿದೆ ಎಂದರು.
ಸಾವಯವ ಕೃಷಿಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಮತ್ತು ಆರೋಗ್ಯಕರ, ರಾಸಾಯನಿಕ-ಮುಕ್ತ ಆಹಾರವನ್ನು ಒದಗಿಸುತ್ತದೆ. ಇದು ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಸುಸ್ಥಿರ ಅಭಿವೃದ್ಧಿ ಹಾಗೂ ರೈತರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಅತ್ಯಗತ್ಯ ಕೃಷಿ ಪದ್ಧತಿಯಾಗಿದೆ ಎಂದು ಹೇಳಿದರು.
ಈ ವೇಳೆ ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ ಮಾತನಾಡಿ, ರೈತರು ಕಬ್ಬು, ಗೋವಿನ ಜೋಳ, ಹತ್ತಿ ಮುಂತಾದ ವಾಣಿಜ್ಯ ಬೆಳಗಳಿಗೆ ಸಿಮೀತವಾಗದೆ; ಕೋಳಿ, ಕುರಿ. ಹೈನುಗಾರಿಕೆ, ಇಂತಹ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಆರ್ಥಕವಾಗಿ ಸಬಲರಾಗ ಸಾದ್ಯವಾಗುತ್ತದೆ ಎಂದರು
ಈ ವೇಳೆ ಗೊಡಗೇರಿ ಮಠದ ಮಲ್ಲಯ್ಯ ಸ್ವಾಮೀಜಿ, ಅಮಲಝರಿಮಠದ ಜ್ಞಾನಮಯಾನಂದ ಸ್ವಾಮೀಜಿ. ದಾಡಬಾಯಿ ಮಠದ ಮಲ್ಲಯ್ಯ ಸ್ವಾಮೀಜಿ, ರೈನಾಪೂರ ಮಠದ ಮಾತೋಶ್ರೀ ಪಾರ್ವತಿತಾಯಿ, ಮಾತೋಶ್ರೀ ಮುದ್ದಮ್ಮತಾಯಿ, ಶ್ರದ್ಧಾನಂದ ಮಠದ ಭೂ ದಾನಿಗಳಾದ ಭರಮಪ್ಪ ಜೋಗಿ, ಬಸಯ್ಯ ಹಿರೇಮಠ, ವಿರೂಪಾಕ್ಷ ಮಾಮನಿ, ಜಗದೀಶ ಕೌಜಗೇರಿ, ರಾಜೇಂದ್ರಗೌಡ ಪಾಟೀಲ, ವೆಣಕಟೇಶ ದೇವರಡ್ಡಿ, ಕೃಷ್ಣಮೂರ್ತಿ ತೋರಗಲ್ಲ, ಚಂದ್ರು ತೋರಣಕಟ್ಟಿ, ಪಕೀರಪ್ಪ ಕಾನನ್ನವರ, ವಿಠ್ಠಲ ಕಳ್ಳಿಗುದ್ದಿ, ಚಂದ್ರು ಅಳಗೋಡಿ, ಬಂಡಿವಡ್ಡರ, ವೆಂಕಣ್ಣ ಹುರಕ್ಕನ್ನವರ, ಗೋಪಾಲ ಕಡೆಮನಿ, ರಾಜು ಕಳ್ಳಿಗುದ್ದಿ, ಗೋವಿಂದ ಕಡೆಮನಿ, ಬಸಪ್ಪ ಶಿದ್ನಾಳ, ಶಂಕರ ಕಳ್ಳಿಗುದ್ದಿ, ಮಲ್ಲಪ್ಪ ಹೋಗಾರ, ಮಹಾಂತೇಶ ಅಡಕಿ, ಮಸಂಗಯ್ಯ ಕುಂಬಾರಗೇರಿಮಠ ಸೇರಿದಂತೆ ಅನೇಕರು ಇದ್ದರು,

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್