LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಮಾಜವನ್ನು ಸಂಘಟಿಸಿ ಬಲಿಷ್ಠವಾಗಿ ಕಟ್ಟೋಣ: ಪ್ರೇಮಕುಮಾರ ಮ್ಯಾಗೇರಿ ಕರೆ.

​ಮುದ್ದೇಬಿಹಾಳ: "ನಮ್ಮ ಸಮಾಜವನ್ನು ನಾವೆಲ್ಲರೂ ಒಗ್ಗೂಡಿ ಜಿಲ್ಲಾಮಟ್ಟದಲ್ಲಿ ಕಟ್ಟಿ ಬೆಳೆಸೋಣ. ಸಮಾಜದ ಸಂಘಟನೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಅತಿ ಮುಖ್ಯವಾಗಿದೆ," ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಹೇಳಿದರು.

​ತಾಲ್ಲೂಕಿನ ಕಂದಗನೂರ ಗ್ರಾಮದಲ್ಲಿ ಶನಿವಾರ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ 'ನೂತನ ಪದಾಧಿಕಾರಿಗಳ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ'ದಲ್ಲಿ ಅವರು ಮಾತನಾಡುತ್ತಿದ್ದರು.

​ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವೆ:

​ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಾಜ  ತಾಲ್ಲೂಕು ಅಧ್ಯಕ್ಷ ಶಂಕರಗೌಡ ಎಸ್. ಶಿವಣಗಿ, "ಸಮಾಜವು ನನ್ನ ಮೇಲೆ ನಂಬಿಕೆಯಿಟ್ಟು ನೀಡಿರುವ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ತಾಲ್ಲೂಕಿನಲ್ಲಿ ಹಂಡೇವಜೀರ ಸಮಾಜವನ್ನು ಕಟ್ಟಿ ಬೆಳೆಸಲು ಸರ್ವರ ಸಹಕಾರ ಅಗತ್ಯ," ಎಂದು ತಿಳಿಸಿದರು.

​ಸಾನಿಧ್ಯ ಮತ್ತು ಆಶೀರ್ವಚನ

​ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇದಮೂರ್ತಿ ಮಹಾದೇವಯ್ಯ ಶಾಸ್ತ್ರಿ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕ ಎಸ್.ಬಿ. ಹಂಡರಗಲ್ಲ ಅವರು ಸಮಾಜದ ಸ್ಥಿತಿಗತಿ ಹಾಗೂ ಸಂಘಟನೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

​ವೇದಿಕೆಯಲ್ಲಿ ಚಂದ್ರಶೇಖರಯ್ಯ ಹಿರೇಮಠ, ಶಿವಣಗೌಡ ಬಿರಾದಾರ, ಪಿ.ಕೆ.ಪಿ.ಎಸ್ ಅಧ್ಯಕ್ಷ ಶಿದ್ದರಾಮಯ್ಯ ಗಣಾಚಾರಿ, ಸಂಗಮೇಶ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಟಿ. ಬಿರಾದಾರ, ನಿಡಗುಂದಿ ವಿ.ಲಿ.ಹ. ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ವಂದಾಲ, ಶಿದ್ರಾಮಪ್ಪ ಶಿವಣಗಿ, ಮಹಾಂತೇಶ ಬಿದರಕುಂದಿ, ಭೀಮನಗೌಡ ಪಾಟೀಲ,

​ಸಮಾಜದ ಕಾರ್ಯಧ್ಯಕ್ಷ ಭೀಮನಗೌಡ ಕೊಡಗಾನೂರ, ಅವ್ವನಗೌಡ, ಎಸ್.ಎಸ್. ಹುಗಾರ, ಸಾಹೇಬಗೌಡ ಪಾಟೀಲ, ಮೈಬುಬಸಾಬ ನಾಯ್ಕೋಡಿ, ಬಸವರಾಜ ಗಂಗೂರ, ಮಂಜುನಾಥಗೌಡ ಪೋಲಿಸ್ ಪಾಟೀಲ,ಬಸವರಾಜ ಡಮನಾಳ,ಗೌಡಪಗೌಡ ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

​ನೂತನ ಪದಾಧಿಕಾರಿಗಳಿಗೆ ಸನ್ಮಾನ

​ಇದೇ ಸಂದರ್ಭದಲ್ಲಿ ಕಂದಗನೂರ ಗ್ರಾಮಸ್ಥರ ವತಿಯಿಂದ ನೂತನ ಪದಾಧಿಕಾರಿಗಳಾದ

ತಾಲ್ಲೂಕು ಅಧ್ಯಕ್ಷ

​ಎಸ್.ಎಸ್. ಶಿವಣಗಿ, ಭೀಮನಗೌಡ ಕೊಡಗಾನೂರ,

​ಮಲ್ಲನಗೌಡ ಬಿರಾದಾರ,ಎಂ ಬಿ ಬಿರಾದಾರ,​ಆರ್.ಎಸ್. ಬಿರಾದಾರ,​ಚಂದ್ರು ಢಮನಾಳ,​ಹುಲ್ಲನಗೌಡ ಬಿರಾದಾರ,​ಚಂದ್ರಶೇಖರ ಗೋನಾಳ,​ಸದಾನಂದ ಪಾಟೀಲ,​ಶೇಷಪ್ಪಗೌಡ ಪಾಟೀಲ,​ದ್ಯಾಮನಗೌಡ ಪಾಟೀಲ,

​ಮುಂತಾದವರನ್ನು ಅತ್ಯಂತ ಸಡಗರದಿಂದ ಸನ್ಮಾನಿಸಿ ಗೌರವಿಸಲಾಯಿತು.

​ಕಾರ್ಯಕ್ರಮದ ಆರಂಭದಲ್ಲಿ ಬಿ.ಸಿ. ಬಿರಾದಾರ ಸ್ವಾಗತಿಸಿದರು, ಬಾಬು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು ಮತ್ತು ಎಸ್.ಆರ್. ಗೌಡರ ವಂದಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್