LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶ್ರೀವ್ಯಾಸರಾಜ ಮಠದಲ್ಲಿ ಶ್ರದ್ದಾ ಭಕ್ತಿ ಯಿಂದ ಮಧ್ವನವಮಿ ಆಚರಣೆ

ಬಳ್ಳಾರಿ, ಜ.29..ಮಗರದ ರೇಡಿಯೋ ಪಾಕ೯ ಶ್ರೀವ್ಯಾಸರಾಜಮಠದಲ್ಲಿ ಶ್ರದ್ದಾ ಭಕ್ತಿ ಯಿಂದ ಮಧ್ವನವಮಿ ಯನ್ನು ಆಚರಿಸಲಾಯಿತು. ಮಧ್ವನವಮಿ ಅಂಗವಾಗಿ  ಪಂಡಿತ್ ಜಿತೇಂದ್ರಾಚಾಯ೯ ಜೋಯಿಸ್ಅವರಿಂದ ಮೂರು ದಿನಗಳ ಶ್ರೀಮಧ್ವವಿಜಯ ಅನುವಾದದ ಕುರಿತು ಪ್ರವಚನ ಜರುಗಿತು.

ಬೆಳಿಗ್ಗೆ ಸುಪ್ರಭಾತ, ವಾಯುಸ್ತುತಿ ಪಾರಾಯಣ ಹಾಗೂ ಪಂಚಾಮೃತ ಅಭಿಷೇಕ ನಡೆದವು. ನಂತರ ಶ್ರೀ ಮಧ್ವಾಚಾರ್ಯರ ಚಿತ್ರಪಟದ ಮೆರವಣಿಗೆ ಶ್ರೀಮಠದಿಂದ ರೇಡಿಯೋ ಪಾಕ೯ ಅಭಯಾಂಜನೇಯ ದೇವಸ್ಥಾನ ವರೆಗೆ ಸಾಗಿತು. ದಾರಿ ಉದ್ದಕ್ಕೂ  ಜಯಘೋಷ,. ಭಜನಾಮಂಡಳಿಗಳಿಂದ ದೇವರನಾಮಸಂಕೀತ೯ನೆ ಕೋಲಾಟ ನಾನಾವಾದ್ಯ ಮೇಳಗಳು ನಡೆದವು. ಶ್ರೀಮಧ್ವಾಚಾಯ೯ರ ಪಟವನ್ನು ರಜತ ರಥದಲ್ಲಿರಿಸಿಮಠದಪ್ರಾಕಾರದಲ್ಲಿ ರಥೋತ್ಸವ ಜರುಗಿಸಲಾಯಿತು. ಶ್ರೀ ಮಧ್ವ ವಿಜಯದ ಅನುವಾದದ  ಪ್ರವಚನ ಮಂಗಳಮಹೋತ್ಸವ ನಡೆಯಿತು.

ಮಧ್ಯಾಹ್ನ ಮಹಾಮಂಗಳಾರತಿ ಅಲಂಕಾರ ಬ್ರಾಹ್ಮಣ ಭೋಜನ, ಭಕ್ತಾದಿಗಳಿಗೆ ತೀರ್ಥಪ್ರಸಾದ ನಡೆಯಿತು. ಮಧ್ವನವಮಿ ಅಂಗವಾಗಿ ಪಂಚಬೃಂದಾವನಗಳಿಗೆ ವಿವಿಧ ಪುಷ್ಪ ಗಳಿಂದ  ಅಲಂಕಾರ ಮಾಡಲಾಗಿತ್ತು. ಮಠದಪ್ರಧಾನ ಅಚ೯ಕರಾದ ಶ್ರೀ.ಕೆ. ಪಾಂಡು ರಂಗಾಚಾಯ೯ ಅವರು ಪೂಜಾ ಕೖಂಕಯ೯ ಗಳನ್ನುನೇರವೇರಿಸಿದರು. ಸಾಯಂಕಾಲ ಶ್ರೀವ್ಯಾಸರಾಜ ಭಜನಾ ಮಂಡಳಿಯ ವರಿಂದ ಭಜನಾ ಕಾಯ೯ಕ್ರಮ ನಡೆಯಿತು ನಂತರ ಸ್ವಸ್ತಿವಾಚನ. ಮಂಗಳಾರತಿ ಜರುಗಿತು. ಭಕ್ತಾಧಿಗಳಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು. ಕಾಯ೯ಕ್ರಮದಲ್ಲಿ  ಮಠದ ಹಿತೖಷಿಗಳು ಹಾಗೂನೂರಾರುಭಕ್ತರು ಪಾಲ್ಗೊಂಡಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್