LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶಾಸಕ ಸಿ.ಎಸ್.ನಾಡಗೌಡರಪರ ಶ್ರೀಗಳ ಬ್ಯಾಟಿಂಗ್

ತಾಳಿಕೋಟೆ,   ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾಗಿರುವ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಈ ಭಾರಿ ಸಚೀವ ಸಂಪುಟು ರಚನೆಯಲ್ಲಿ  ಸಚೀವ ಸ್ಥಾನಮಾನ ನೀಡಿದ್ದೇ ಆದಲ್ಲಿ ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೇಸ್ ಸರ್ಕಾರವು ಅತ್ಯಂತ ಪ್ರಭಾವಶಾಲಿಯಾಗಲಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭವಿಷ್ಯ ನುಡಿದ್ದಾರೆ.
        ಬುಧವಾರರಂದು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಕಳೆದ ೫೦ ವರ್ಷಗಳ ರಾಜಕಾರಣದಲ್ಲಿ ಕಳಂಕ ರಹೀತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ ಅವರಲ್ಲಿರುವ ಅನುಭವ ಬಹಳೇ ದೊಡ್ಡಮಟ್ಟದ್ದಾಗಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳುವ ಸುವರ್ಣಾವಕಾಶ ಕಾಂಗ್ರೇಸ್ ಪಕ್ಷದವರಿಗೆ ಒದಗಿ ಬಂದಿದೆ ರಾಜ್ಯದ ಸರ್ವ ಜನರ ನಾಡಿ ಮಿಡಿತ ಅರೀತ ಅತ್ಯಂತ ಹಿರಿಯ ಶಾಸಕರಾಗಿರುವ ಅಪ್ಪಾಜಿ ನಾಡಗೌಡರ ಮನೆತನ ಬ್ರೀಟಿಷರ ಕಾಲದಿಂದಲೂ ದೇಶಕ್ಕಾಗಿ ಅನನ್ಯ ಸೇವೆ ಸಲ್ಲಿಸಿದ ಕುಟುಂಭವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ನಾಡಗೌಡರ ಮನೆತನ ಯಾವತ್ತಿಗೂ ಹಣದಿಂದ ಹೋದುದ್ದಲ್ಲಾ ಗುಣದಿಂದ ಸಚ್ಚ್ಯಾರಿತ್ರ್ಯತನದಿಂದ ಗುರುತಿಸಿಕೊಂಡ ರಾಜ ಮನೆತನವಾಗಿದೆ ಇಂದಿನ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯ ಆಡಳಿತ ನಡೆಸುವ ಮತ್ತು ರಾಜ್ಯದ ಜನರ ಸೇವೆ ಮಾಡುವ ಅತ್ಯಂತ ಹಿರಿಯ ರಾಜಕೀಯ ಮುತ್ಸದ್ದಿತನದಲ್ಲಿ ಗುರುತಿಸಿಕೊಂಡಿರುವ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚೀವ ಸ್ಥಾನ ನೀಡಿದ್ದೇ ಆದಲ್ಲಿ ರಾಜ್ಯದ ರಾಜಕಾರಣದಲ್ಲಿಯೇ ಹೊಸ ದಿಕ್ಕನ್ನೇ ಬದಲಾವಣೆಗೊಳ್ಳಲಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರೂ ಕೂಡಾ ಒಳ್ಳ:ಯ ಧಾರ್ಮಿಕ ಭಾವನೆಯುಳ್ಳ ಮುಖ್ಯಮಂತ್ರಿಯಾಗಿರುವದರಿಂದ ಬಸವಣ್ಣನವರ ವಿಚಾರಧಾರೆಯಂತೆ ಎಲ್ಲರಿಗೂ ಸಮಾನಾಂತರದಲ್ಲಿ ರಾಜ್ಯದ ಜನರಿಗೆ ನ್ಯಾಯ ಒದಗಿಸುವತ್ತ ಸಾಗಿದ್ದಾರೆ ಈ ಭಾರಿಯ ಸಚೀವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚೀವ ಸ್ಥಾನ ನೀಡಿದರೆ ಅವರ ಸಾರಥಿಯಾಗಿ ರಾಜ್ಯದ ಅಭಿವೃದ್ದಿಗ ಮುನ್ನುಡಿಬರೆಯಲಿದ್ದಾರೆ ಈ ಹಿಂದೆ ಅಲ್ಪ ಲಾಭದಲ್ಲಿದ್ದ ಕೆಆರ್‌ಡಿಎಲ್ ಸಂಸ್ಥೆ ೫೦೦ ಕೋಟಿಗೂ ಅಧಿಕ ಲಾಭಗಳಿಸುವತ್ತ ಮುನ್ನಡೆದಿರುವದು ಶಾಸಕ ಸಿ.ಎಸ್.ನಾಡಗೌಡ ಅವರ ಶ್ರಮದ ಕೊಡುಗೆಯಾಗಿದೆ ಇದರಿಂದ ಸರ್ಕಾರಕ್ಕೂ ದೊಡ್ಡ ಮಟ್ಟದ ಲಾಭವನ್ನು ತಂದುಕೊಟ್ಟಿದ್ದಾರೆ ಶಾಸಕ ನಾಡಗೌಡರು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಭಲವರ್ದನೆಯಲ್ಲಿ ಪಕ್ಷದ ನಾಯಕರುಗಳೊಂದಿಗೆ ಮುನ್ನೇಜ್ಜೆ ಇಟ್ಟಂತಹ ಪ್ರಭಾವಿ ನಾಯಕರು ಆಗಿದ್ದಾರೆ ಅವರಿಗೆ ಕ್ಯಾಬಿನೇಟ್ ದರ್ಜೆಯ ಸಚೀವ ಸ್ಥಾನಮಾನವನ್ನು ನೀಡಿ ಪಕ್ಷದ ಹಾಗೂ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಒದಗಿಸಿಕೊಡುವದರೊಂದಿಗೆ ಲಕ್ಷಾಂತರ ಜನ ಅಭಿಮಾನಿಗಳ ಆಸೆಯನ್ನು ಇಡೇರಿಸಬೇಕೆಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾಂಗ್ರೇಸ್ ಹೈಕಮಾಂಡಗೆ ಒತ್ತಾಯಿಸಿದ್ದಾರೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್