LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಮೇ.12: ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಮಂಗಳವಾರ ವಿವಿಧ ವಾರ್ಡುಗಳಲ್ಲಿ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 21ರ ಹರಿಪ್ರಿಯ ನಗರದಲ್ಲಿ 5 ಕೋಟಿ ರೂ.ಗಳ ಅನುದಾನದ ವೆಚ್ಚದಲ್ಲಿ ಬೀದಿ ದೀಪ, ಚರಂಡಿ, ಒಳ ಚರಂಡಿ, ಪೇವರ್ಸ್ ಅಳವಡಿಕೆ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾಜಿ ಮೇಯರ್ ರಾಜೇಶ್ವರಿ, ಚಾನಾಳ್ ಶೇಖರ್, ಶಿವಶಂಕರಗೌಡ, ಯಾಳ್ಪಿ ಪಂಪನಗೌಡ, ತಿಮ್ಮನಗೌಡ, ನಾಗೇಶ್ವರ ರಾವ್, ರವಿ, ಶಶಿಧರ ಮೇಟಿ, ಗುತ್ತಿಗನೂರು ವಿರೂಪಾಕ್ಷಗೌಡ, ಅಂಗಡಿ ಪಂಪಾಪತಿ, ಮೇಟಿ ದಿವಾಕರಗೌಡ, ಶ್ಯಾಮ್, ಯುಧಿಷ್ಠಿರ, ವಾಸು ರೆಡ್ಡಿ ಮತ್ತಿತರರು ಹಾಜರಿದ್ದರು.
ತದನಂತರ ಇದೇ ವಾರ್ಡಿನ ಸಿದ್ಧಾರ್ಥ ನಗರದಲ್ಲಿ 50 ಲಕ್ಷ ರೂ.ಗಳ ಅನುದಾನದ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾಜಿ ಮೇಯರ್ ರಾಜೇಶ್ವರಿ, ಸಿರಿಗೆರೆ ಪನ್ನರಾಜ್, ಹಿರೇಮಠ್, ಪ್ರಭಾಕರ್ ರೆಡ್ಡಿ, ಚಾನಾಳ್ ಶೇಖರ್, ವಿಜಯಲಕ್ಷ್ಮೀ, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ, ವಾಸು ರೆಡ್ಡಿ ಮತ್ತಿತರರು ಹಾಜರಿದ್ದರು.
ಬಳಿಕ ವಾರ್ಡ್ ಸಂಖ್ಯೆ 24ರ ಬ್ರಹ್ಮಯ್ಯ ಕಾಲೋನಿಯಲ್ಲಿ 50 ಲಕ್ಷ ರೂ.ಗಳ ಅನುದಾನದ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ನಾರಾ ವಿನಯ್ ರೆಡ್ಡಿ, ವೀರೇಂದ್ರ, ಪೋಲಕ್ (ಹನಮಂತ) ರೆಡ್ಡಿ,  ಚಾನಾಳ್ ಶೇಖರ್, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ, ವಾಸು ರೆಡ್ಡಿ ಮತ್ತಿತರರು ಹಾಜರಿದ್ದರು.
ತದನಂತರ ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 34ರ ವಿದ್ಯಾನಗರ 7ನೇ ಅಡ್ಡ ರಸ್ತೆಯ ಬಳಿ 81.93 ಲಕ್ಷ ರೂ.ಗಳ ಅನುದಾನದ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಪಾಲಿಕೆಯ ಸದಸ್ಯರು ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ವಿಷ್ಣು ಬೋಯಪಾಟಿ, ಮಲ್ಲಿ, ಯೋಗಾನಂದ ರೆಡ್ಡಿ, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ, ಯೋಗೇಂದ್ರ ಕಟ್ಟ, ಇಟ್ಟಾವರಂ ಮಲ್ಲಿಕಾರ್ಜುನ, ಲಾಲ್ ಮೋಹನ್, ಭತ್ರಿ ಮಂಜು, ರಘು ಕಟ್ಟ, ಹರ್ಷ, ಸತೀಶ್ ಮತ್ತಿತರರು ಹಾಜರಿದ್ದರು.
ಬಳಿಕ ವಾರ್ಡ್ ಸಂಖ್ಯೆ 04ರ ಗುಗ್ಗರಹಟ್ಟಿಯ ಮುಖ್ಯ ರಸ್ತೆ 1.50 ಕೋಟಿ ರೂ.ಗಳ ವೆಚ್ಚದಲ್ಲಿ ಪಾಂಡುರಂಗ ಗುಡಿಯಿಂದ ಹೆಚ್ಎಲ್ ಕಾಲುವೆ ಹೊನ್ನಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಡಿ.ಸೂರಿ, ಸುಬ್ಬರಾಯುಡು, ಗುಗ್ಗರಹಟ್ಟಿ ಅನ್ವರ್, ಎಂಎನ್ಟಿ ಮಾಬು, ಸಿ.ಡಿ. ಹೊನ್ನೂರಸ್ವಾಮಿ,  ಪರಶುರಾಮುಡು, ಹೊನ್ನಪ್ಪ, ಮತ್ತಿತರರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್