ಸಂಕೇಶ್ವರ : ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದ ಹಿರಣ್ಯಕೇಶಿ ನದಿಯು ಉಕ್ಕಿ ಹರಿಯುತ್ತಿದ್ದು, ಆದರಿಂದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ನಿರ್ದೇಶಕರಾದ ಪ್ರಭುದೇವ ಪಾಟೀಲ ದಂಪತಿಗಳು ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಶುಕ್ರವಾರ ನದಿಗೆ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅವರಿಂದ ಪೂಜೆ ಪುನಸ್ಕಾರಗಳು ನಡೆಸಿ, ಬಾಗಿನ ಅರ್ಪಿಸಲಾಯಿತ್ತು.
ಕಾರ್ಖಾನೆಯ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ಹಿರಣ್ಯಕೇಶಿ ನದಿ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿದೆ. ಮುಂಬರುವ ಹಂಗಾಮಿನಲ್ಲಿ 10 ಲಕ್ಷ ಮೆಟ್ರಿಕ್ ಟನ್ಗಿಂತ ಹೆಚ್ಚಿನ ಕಬ್ಬು ಅರೆಯುವ ಗುರಿ ಹೊಂದಲಾಗಿದ್ದು, ಕಬ್ಬು ಬೆಳೆಗಾರರ ಸಂಪೂರ್ಣ ಸಹಕಾರದಿಂದ ಈ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ವ್ಯವಸ್ಥಾಪಕ ನಿರ್ದೇಶಕ ಮಹಾದೇವಸ್ವಾಮಿ ಡಿ.ಎಸ್., ಕಾರ್ಯಾಲಯ ಅಧೀಕ್ಷಕ ಸುಭಾಷ ನಾಶಿಪುಡಿ, ಅಕೌಂಟ್ಸ್ ಜನರಲ್ ಸಿ.ಬಿ. ಮರೇದಿ, ಮುಖ್ಯ ಅಭಿಯಂತರ ಪಿ.ಎಂ. ಖೋತ, ಮುಖ್ಯ ರಸಾಯನಶಾಸ್ತ್ರಜ್ಞ (ಪ್ರೊಸೆಸ್) ಜಿ.ಬಿ. ಪಾಟೀಲ, ಡಿಸ್ಟಿಲರಿ ಮುಖ್ಯ ರಸಾಯನಶಾಸ್ತ್ರಜ್ಞ ಭರತೇಶ ತೇರಣಿ, ವಾಹನ ವಿಭಾಗದ ಅಭಿಯಂತರ ಎಸ್.ಎ. ಕಲ್ಲಟ್ಟಿ, ಕಬ್ಬು ಅಭಿವೃದ್ಧಿ ಅಧಿಕಾರಿ ಆರ್.ವಿ. ರೇವಣ್ಣವರ, ಸಮಯಪಾಲಕ ಎನ್.ಎಸ್. ಮರಬಸನ್ನವರ, ಭದ್ರತಾ ಅಧಿಕಾರಿ ಎಂ.ಬಿ. ಇಂಗಳಿ, ಸ್ಟೋರ್ ಕೀಪರ್ ಜಿ.ಐ. ಬೊಮ್ಮನ್ನವರ, ಮಾರಾಟಾಧಿಕಾರಿ ಡಿ.ಎನ್. ಚೌಗಲಾ, ಖರೀದಿ ಅಧಿಕಾರಿ ಉಮೇಶ ಪಾಟೀಲ, ಗೋದಾಮು ಕೀಪರ್ ಎಸ್.ಎಂ. ಅಂಕಲಗಿ ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರು ಹಾಜರಿದ್ದರು.