ಬಳ್ಳಾರಿ. ಜು. 30 : ಸಂಸ್ಕಾರ ಭಾರತಿ ಮಹಾನಗರ ಬಳ್ಳಾರಿ ಅವರಿಂದ ಪಾರ್ವತಿ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಗುರು ಪೂರ್ಣಿಮೆ ಪ್ರಯುಕ್ತ ನಟರಾಜ ಪೂಜೆ ಮತ್ತು ಗುರುವಂದನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಂ ರಾಜಶೇಖರಯ್ಯ ಮುಖ್ಯ ಶಿಕ್ಷಕರು ವಹಿಸಿಕೊಂಡಿದ್ದರು ಚಂದ್ರಶೇಖರ್ ಗೌಡ ಗುತ್ತಿಗೆದಾರರು ಬಳ್ಳಾರಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿದರು
ಮುಖ್ಯ ಅತಿಥಿಗಳಾಗಿ ಎಸ್ ಗುರುರಾಜ್, ನೀಲಗಂಗಾ ಕೆಎಚ್, ಯಲ್ಲನಗೌಡ ಶಂಕರ ಬಂಡೆ ಅಧ್ಯಕ್ಷರು ಸಂಸ್ಕಾರ ಭಾರತಿ ಬಳ್ಳಾರಿ ,ಸಿದ್ದಲಿಂಗಯ್ಯ ಕೆಎಂ ನಿವೃತ್ತ ಶಿಕ್ಷಕರು ಬಸವರಾಜ್ ಜೋಳದ ರಾಶಿ ನಿವೃತ್ತ ಶಿಕ್ಷಕರು ಶಿವೇಶ್ವರ ಗೌಡ ರಂಗಕರ್ಮಿ ಬಳ್ಳಾರಿ ಪದ್ಮಾವತಿ ಶಿಕ್ಷಕಿ ಬಳ್ಳಾರಿ ಇವರು. ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜೆ ನರಸಿಂಹಮೂರ್ತಿ ವಿಶೇಷ ಉಪನ್ಯಾಸವನ್ನು ನೀಡಿದರು.
ಶಿಕ್ಷಕರು ಹಾಗೂ ಹಾಸ್ಯ ಕಲಾವಿದರು ಸಿರುಗುಪ್ಪದ ವಿಎಂ ವೀರಭದ್ರಯ್ಯ ಸ್ವಾಮಿಗಳು ಸಂಗೀತ ಶಿಕ್ಷಕರು ಕುರುಗೋಡು, ಇವರನ್ನು ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು
ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದ ಅಮರೇಶ ಹಚ್ಚೋಳ್ಳಿ, ಮಕ್ಕಳು ತಂದೆ ತಾಯಿ ಮತ್ತು ಗುರುಗಳನ್ನು ಗೌರವಿಸಬೇಕು ವಿನಯ ಶೀಲರಾಗಬೇಕೆಂದರು. ನರಸಿಂಹಮೂರ್ತಿ ಶಿಕ್ಷಕರು ಸಿರುಗುಪ್ಪ ಇವರು ಮಕ್ಕಳಿಗೆ ತಿಳಿಸಿದರು ,ಗುರು ಶಿಷ್ಯರ ಸಂಬಂಧದ ಬಗ್ಗೆ ಸವಿಸ್ತಾರವಾಗಿ ಗುತ್ತಿಗೆದಾರರಾದ ಚಂದ್ರಶೇಖರ ಗೌಡ್ರು ಮಕ್ಕಳ ಮನಸ್ಸಿಗೆ ನಾಟುವಂತೆ ಹೇಳಿದರು ಅಧ್ಯಕ್ಷತೆ ವಹಿಸಿದ ರಾಜಶೇಖರಯ್ಯ ಕೆಎಂ ಮುಖ್ಯ ಶಿಕ್ಷಕರು ಗುರುಪೂರ್ಣಿಮೆಯ ಶುಭಾಶಯ ಹೇಳುವ ಮೂಲಕ ಸಂಸ್ಕಾರ ಬಹಳ ಮುಖ್ಯ ಸಂಸ್ಕಾರವಂತರಾಗಬೇಕೆಂದು ಮಕ್ಕಳಲ್ಲಿ ತಿಳಿಸಿದರು.
ಗುರುವಂದನೆಯನ್ನು ಸ್ವೀಕರಿಸಿದ ವಿಎಮ್ ವೀರಭದ್ರಯ್ಯ ಸ್ವಾಮಿಗಳು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಹಾಡು ಪ್ರಸ್ತುತಪಡಿಸಿದರು ಈ ಸಂದರ್ಭದಲ್ಲಿ ಬೈಲಾಟ ಶಿಕ್ಷಕರಾದ ಖ್ಯಾತ ಕಲಾವಿದರಾದ ತಿಪ್ಪೇಸ್ವಾಮಿ ಮುದ್ದಟನೂರುರವರು , ತೊಗಲುಗಂಬೆ ಕಲಾವಿದರಾದ ಸುಬ್ಬಣ್ಣ, ವೀರೇಶ್ ದಳವಾಯಿ, ನತಿ ರಘುರಾಮ ಶಾಲೆಯ ಎಲ್ಲಾ ಶಿಕ್ಷಕರು ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಮುದ್ದು ಮಕ್ಕಳು ಭಾಗವಹಿಸಿದ್ದರು.