ಬಳ್ಳಾರಿ, ಜು.24:: ಜಿಲ್ಲೆಯ ಕುರುಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ ಸರ್ವೇ ಸಂಖ್ಯೆ 51ಎ1/ಎ2 ಹಾಗೂ 51/21 ಜಮೀನಿನಲ್ಲಿ ಅಕ್ರಮ ಗ್ರಾವೆಲ್ ಸಾಗಾಣಿಕೆ ನಡೆಸಿದ ಆರೋಪದಲ್ಲಿ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣ ಸಂಪೂರ್ಣ ಸುಳ್ಳಾಗಿದ್ದು, ರಾಜಕೀಯ ದುರುದ್ದೇಶದಿಂದ ತಮ್ಮ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ದಲಿತ ಮುಖಂಡ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ ನಾಯಕ ಎಚ್.ಎಂ. ಗುರುಮೂರ್ತಿ ಆರೋಪಿಸಿದರು.
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಗುರುವಾರದಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2026ರ ಮೇ 19ರಂದು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಏಳುಬೆಂಚಿ ಗ್ರಾಮದ ಬ್ಯಾಳೆ ಶರಣಪ್ಪ, ಬ್ಯಾಳೆ ಮುದಿಯಪ್ಪ, ವೇಣಿ ವೀರಾಪುರ ಗ್ರಾಮದ ಕೆ. ಕರಿಬಸಪ್ಪ, ತಿಮ್ಮಲಾಪುರ ಗ್ರಾಮದ ಗೋಸುವಾಳ ಗೂಳೆಪ್ಪ ಹಾಗೂ ಸ್ವಾರೆ ಬನವರಾಜ ಸೇರಿದಂತೆ ಇನ್ನಿತರರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸುವುದರ ಜೊತೆಗೆ ಮಾಧ್ಯಮಗಳಲ್ಲಿಯೂ ತಪ್ಪು ಪ್ರಚಾರ ನಡೆಸಿದ್ದಾರೆ
ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಜಮೀನಿನಲ್ಲಿ ತಾವು ಯಾವುದೇ ರೀತಿಯ ಗ್ರಾವೆಲ್ ಗಣಿಗಾರಿಕೆ ಅಥವಾ ಸಾಗಾಣಿಕೆ ನಡೆಸಿಲ್ಲ ಅದೆಲ್ಲವೂ ಕಟ್ಟುಕತೆಯಾಗಿದೆ ಎಂದರು.
ಅವರು ತಿಳಿಸಿರುವ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ಅದರಲ್ಲಿ ಇನ್ನೆಷ್ಟು ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಆರೋಪಿತರೆ ರಾತ್ರೋರಾತ್ರಿ ತನ್ನಗಟ್ಟಲೆ ಗ್ರಾವೆಲ್ ಕಳ್ಳ ಸಾಗಣೆ ಮಾಡಿರುತ್ತಾರೆ ಅವರ ಮೇಲೆ ಏನು ಕ್ರಮವಾಗದಂತೆ ಈ ರೀತಿಯಾಗಿ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು
ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಮ್ಮನ್ನು ನಿರ್ದೋಷಿ ಎಂದು ಘೋಷಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ ಗುರುಮೂರ್ತಿ , ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮಾನಹಾನಿಗೆ ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ರೀತಿಯಾಗಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದರು
ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ, ವೆಂಕಟೇಶ್, ಕೆಂಚಪ್ಪ, ಶೇಖ್ ವಲಿ, ಮೊಹಮ್ಮದ್ ಅಲಿ, ಬಸವರಾಜ್, ದನಪ್ಪ, ಬಾಳಪ್ಪ ಹಾಗೂ ನಳಿನ್ ಉಪಸ್ಥಿತರಿದ್ದರು.