LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪ್ರೀತಿ ಬಂಗಾರ ೫ ನೇ ಚುಟುಕು ಪುಸ್ತಕ ಲೋಕಾರ್ಪಣೆ 


ರಾಯಬಾಗ: ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡು, ಮುಂದಿನ ಪೀಳಿಗೆಗೆ ಮಾದರಿಯಾಗಿಬೇಕೆಂದು ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಹೇಳಿದರು.

ಶನಿವಾರ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಾರ್ವಜನಿಕ ಆಸ್ಪತ್ರೆಯ ಶೂಶ್ರೂಷಾಧಿಕಾರಿ, ಯುವ ಕವಿ ಶಿರೂರ ಶ್ರೀಶೈಲ ಇವರ ಪ್ರೀತಿ ಬಂಗಾರ ೫ ನೇ ಚುಟುಕು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

  ಗೋಕಾವಿ ನಾಡಿನ ಹಿರಿಯ ಸಾಹಿತಿ ಈಶ್ವರ ಮಮದಾಪೂರ ಮಾತನಾಡಿ, ಚುಟುಕುಗಳು ಚಿಕ್ಕದಾದರೂ ಅದರ ಒಳಾರ್ಥ ಹಿರಿದಾಗಿರುತ್ತದೆ, ಶಿರೂರ ಶ್ರೀಶೈಲ ಅವರ ಚುಟುಕುಗಳಲ್ಲಿ ಹಾಸ್ಯ ಲಾಸ್ಯ, ವಿಡಂಬನೆ, ಸತಿಪತಿಗಳ ಸಂಬಂಧ, ಪ್ರೀತಿ ಪ್ರೇಮ, ಹೀಗೆ ಹಲವಾರ ಆಯಾಮಗಳಿಂದ ಕೂಡಿದ್ದು, ಓದುಗರಿಗೆ ಪ್ರೀಯ ಏನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

  ಡಾ. ಕುಮಾರ ತಳವಾರ, ವಕೀಲ ಡಿ.ಎಚ್.ಯಲ್ಲಟ್ಟಿ, ಡಾ. ಪ್ರಶಾಂತ ಹೊತ್ತಗಿಮಠ, ಡಾ. ಎಸ್.ಎಮ್.ಪಾಟೀಲ, ಶಿವಾನಂದ ಬೆಳಕೂಡ, ತುಕಾರಾಮ ವಂಟಗೋಡಿ, ಪಿ.ಎಸ್. ನಾಯಿಕ, ರವೀಂದ್ರ ಪಾಟೀಲ, ಕುಮಾರ ಅವಳೆ, ಎಚ್.ಎ.ಭಜಂತ್ರಿ, ಗಣೇಶ ಕಾಂಬಳೆ, ದಿಲೀಪ ಕಾಂಬಳೆ, ಅಶೋಕ ಅಂಗಡಿ, ಅನೀಲ ಕೊರವಿ, ಸಾಗರ ಝೆಂಡೆನ್ನವರ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷ,  ಪದಾಧಿಕಾರಿಗಳು ಇದ್ದರು.
 ಸಾಂಗಲಿಯ ಉಷಾಕಲಾ ಆಸ್ಪತ್ರೆ ಹಾಗೂ ಮಿರಜದ ಸೇವಾ ಸದನ ಆಸ್ಪತ್ರೆ ಹೃದಯ ರೋಗ ತಜ್ಞರು ಪಟ್ಟಣದ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್