LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶ್ರೀ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ರೂ.೭.೩೦ ಕೊಟಿ ಲಾಭ 


ಮೂಡಲಗಿ : ಪಟ್ಟಣದ ಪ್ರತಿಷ್ಠಿತ ಶ್ರೀ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ೨೦೨೫-೨೬ನೇ ಹಣಕಾಸಿನ ವರ್ಷದ ಕೊನೆಯಲ್ಲಿ ರೂ.೭.೩೦ ಕೊಟಿ ಲಾಭ ಗಳಿಸಿ ಪ್ರಗತಿ ಪಥದತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಪುಲಕೇಶ್ ಸೋನವಾಲ್ಕರ್ ತಿಳಿಸಿದರು. 
ಮಂಗಳವಾರದಂದು ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಂಘವು ರೂ.೬.೮೯ ಕೋಟಿ ಶೇರು ಬಂಡವಾಳ, ರೂ.೩೫ ಕೋಟಿ  ನಿಧಿಗಳು, ಸಾರ್ವಜನಿಕ ವಲಯದಿಂದ ರೂ.೪೭೬ ಕೋಟಿ ಠೇವುಗಳು, ರೂ.೧೫೯ ಕೋಟಿ ಗುಂತಾವಣಿಗಳನ್ನು ಹೊಂದಿದೆ. ವಿವಿಧ ತೆರನಾದ ರೂ.೨೬೭ ಕೋಟಿ ಸಾಲ ನೀಡಿದೆ, ರೂ.೫೪೩ ಕೋಟಿ ದುಡಿಯುವ ಬಂಡವಾಳ, ೧೭,೫೬೮ ಶೇರುದಾರನ್ನು ಹೊಂದಿ ರೂ.೧,೯೦೬ ಕೋಟಿ ವಾರ್ಷಿಕ ವಹಿವಾಟು ಮಾಡಿದೆ. ಪ್ರಸಕ್ತ ಸಂಘವು ೧೮ ಶಾಖೆಗಳನ್ನು ಹೊಂದಿದ್ದು ಶೀಘ್ರದಲ್ಲೇ ೭ ನೂತನ ಶಾಖೆಗಳು ಪ್ರಾರಂಭವಾಗಲಿವೆ ಎಂದರು. 
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸುಭಾಸ.ಆರ್.ಸೋನವಾಲಕರ, ನಿರ್ದೇಶಕರಾದ ರವೀಂದ್ರ.ಪಿ ಸೋನವಾಲಕರ, ಡಾ.ಶಂಕರ.ಎಸ್ ದಂಡಪ್ಪನವರ, ಅಶೋಕ.ಎಮ್. ಹೊಸೂರ, ರೇವಪ್ಪ ಕೆ. ಕುರಬಗಟ್ಟಿ, ಶಿವಬಸು ಎಮ್.ಬೂದಿಹಾಳ, ಶಾರದಾ ಬಿ. ಗುಲಗಾಜಂಬಗಿ, ವಿದ್ಯಾವತಿ ಆರ್ ಸೋನವಾಲಕರ, ಮಂಜುಳಾ.ಎಸ್. ಬಳಿಗಾರ, ಗಂಗವ್ವಾ.ಕೆ.ಸಣ್ಣಪ್ಪನವರ, ಹಣಮಂತ.ಎಸ್.ಸಣ್ಣಕ್ಕಿ, ಲೆಕ್ಕ ಪರಿಶೋಧಕ ಭೀಮಶಿ ಜರಳಿ, ಪ್ರಧಾನ ವ್ಯವಸ್ಥಾಪಕರಾದ ವೆಂಕಪ್ಪ.ಎಚ್. ಬಾಲರಡ್ಡಿ ಪ್ರಧಾನ ಕಛೇರಿ ಮ್ಯಾನೇಜರ ಮಹೇಶ.ಬಿ.ಮಾಲಗಾರ, ಮಾರಾಟಾಧಿಕಾರಿ ಹಣಮಂತ.ಎಸ್.ಕುಂಬಾರ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್