LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸರ್ಕಾರ ನೀಡಿದ ವಸ್ತುಗಳನ್ನು ಸಮರ್ಪಕವಾಗಿ ಬಳಸಿ: ರೂಪಾ ಹೊಸಟ್ಟಿ

ರನ್ನ ಬೆಳಗಲಿ: ಮಾ.೦೩.,ಪಟ್ಟಣ ಪಂಚಾಯತ ಕಾರ್ಯಾಲಯದ ಅಂಗಳದಲ್ಲಿ ವಿಕಲಚೇತನರಿಗೆ ಸೋಲಾರ್ ದೀಪಗಳನ್ನು ಮತ್ತು ಪೌರಕಾರ್ಮಿಕರಿಗೆ ಸುರಕ್ಷಿತಾ ಕಿಟ್ ವಿತರಣೆ ಜರುಗಿತು.

ರೂಪಾ ಸದಾಶಿವ ಹೊಸಟ್ಟಿ ಪ.ಪಂ ಅಧ್ಯಕ್ಷರು ಫಲಾನುಭವಿ ಸಲಕರಣೆಗಳ ವಿತರಣೆಗೆ ಚಾಲನೆ ನೀಡಿ,  ಸರ್ಕಾರ ನೀಡಿದ ವಸ್ತುಗಳನ್ನು ಸಮರ್ಪಕವಾಗಿ ಉಪಯೋಗಿಸಬೇಕು. ಪೌರಕಾರ್ಮಿಕರಿಗೆ ಒದಗಿಸಲಾದ ಸುರಕ್ಷಿತಾ ಕಿಟ್ ಬಹುಪಯೋಗದ ವಸ್ತುಗಳಾಗಿವೆ,ಆರೋಗ್ಯ ದೃಷ್ಟಿಯಿಂದ ತಮ್ಮ ಸುರಕ್ಷತೆಗಾಗಿ ನಿತ್ಯವೂ ಅದರ ಬಳಕೆ ಆಗಬೇಕು.ನಿಮ್ಮ ಆರೋಗ್ಯವೇ ನಮ್ಮ ಪಟ್ಟಣದ ಆರೋಗ್ಯವಾಗಿದೆ. ನರ್ಮಲ್ಯದ ರೂವಾರಿಗಳೇ ತಾವಾಗಿದ್ದೀರಿ ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಚೆರ್ಮನ್ನರಾದ ಪ್ರವೀಣ ಬರಮನಿ,ಮುಖ್ಯಾಧಿಕಾರಿ  ಈರಣ್ಣ ದಡ್ಡಿ,ಸಿದ್ದುಗೌಡ ಪಾಟೀಲ,ಪ್ರವೀಣ ಪಾಟೀಲ,ಸಾವಿತ್ರಿ ರಾಮದುರ್ಗ,ಭೀಮಪ್ಪ ಹೊಸಮನಿ,ಕರೆಪ್ಪ ಕುಂಬಾಳಿ, ಕಾಶವ್ವ ಪುರಾಣಿಕ,ಮುಬಾರಕ ಅತ್ತಾರ,ರೇಣುಕಾ ಬಾಗಲಿ,ಮುತ್ತಪ್ಪ ಸನ್ನಟ್ಟಿ,ಸದಾಶಿವ
ಹೊಸಟ್ಟಿ,ಸಂಗಪ್ಪ ಅಮಾತಿ,ಈರಪ್ಪ ಕಿತ್ತೂರ,ಸಿದ್ದು ಸಾಂಗ್ಲಿಕರ,ಬಸಪ್ಪ ಗೌರಣ್ಣವರ, ಸಿದ್ದು ದೊಡಟ್ಟಿ ಜೊತೆಗೂಡಿ ಫಲಾನುಭವಿ ವಿಕಲಚೇತನರಾದ ರಾಗಿಣಿ ಹನಗಂಡಿ,ಸುಮಿತ್ರಾ ಹಳ್ಳೂರ, ಮಹಾಲಿಂಗ ಬಂದಕ್ಕನ್ನವರ, ಚಂದ್ರಕಾಂತ ಗರಗದ, ಯಲ್ಲಪ್ಪ ಲಾಲಿಬುಡ್ಡಿ,ಶಂಕ್ರವ್ವ ಹೆಗ್ಗನ್ನವರ ರವರಿಗೆ ಸೋಲಾರ ದೀಪಗಳನ್ನು ಮತ್ತು ಎಲ್ಲಾ ಪೌರ ಕಾರ್ಮಿಕರಿಗೆ ಸುರಕ್ಷಿತ ಕಿಟ್‌ಗಳನ್ನು ವಿತರಿಸಿದರು.

ಬಾಬು ಜಕಾತಿ,ಉಮಾಶ್ರೀ ನೇಕಾರ,ಮಹಾಲಿಂಗಪ್ಪ ಸಮೇರ,ರಾಜು ಮುಗಳಖೋಡ,ಸತ್ಯಪ್ಪ ಹನಗಂಡಿ,ಶಿವು ಸುನ್ನಾಳ ಪ,ಪಂ ಸಿಬ್ಬಂದಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್