ತಾಳಿಕೋಟೆ, ಪಟ್ಟಣದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಜರುಗುವ ಸಪ್ತಭಜನಾ ಕಾರ್ಯಕ್ರಮವು ದಿ. ೧೯ ರವಿವಾರರಂದು ಪ್ರಾರಂಭಗೊಂಡಿತು.
೯ ದಿನಗಳವರೆಗೆ ಜರುಗಲಿರುವ ಈ ಸಪ್ತ ಭಜನಾ ಕಾರ್ಯಕ್ರಮಕ್ಕೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ|| ಮುರುಘೇಶ ವಿರಕ್ತಮಠ ಅವರು ಚಾಲನೆ ನೀಡಿದರು.
ಪ್ರತಿದಿನ ಹಗಲು ರಾತ್ರಿ ಸತತವಾಗಿ ನಡೆದು ದಿ. ೨೬ ರವಿವಾರರಂದು ಬೆಳಿಗ್ಗೆ ೫ ಘಂಟೆಗೆ ಗೋಪಾಲ ಕಾವಲಿ(ಮೊಸರುಗಡಿಗೆ) ಒಡೆಯುವದಿನದಂದು ಮುಕ್ತಾಯಗೊಳ್ಳಲಿದೆ.
ಸುಮಾರು ೧೬೦ ಕ್ಕೂ ಹೆಚ್ಚು ಗ್ರಾಮಸ್ಥರು ಈ ಸಪ್ತ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ ಸಾಗಿದ್ದಾರೆ. ದಿನದ ೧ ಘಂಟೆಗೆ ಒಂದು ಗ್ರಾಮಸ್ಥರಿಗೆ ಭಜನೆಯಲ್ಲಿ ಪಾಲ್ಗೊಳ್ಳಲು ಹಂಚಿಕೆ ಮಾಡಲಾಗಿದ್ದು ಸಪ್ತಭಜನೆಯಲ್ಲಿ "ಓಂ ನಃಮ ಶಿವಾಯ" ನಾಮಾಂಕಿತ ಮಠಕ್ಕೆ ಆಗಮಿಸುತ್ತಿರುವ ಭಕ್ತಾಧಿಕಾರಿಗಳಿಗೆ ಭಕ್ತಿಯ ಮಾರ್ಗದತ್ತಗೊಂಡೊಯುತ್ತಿದೆ.