LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಏಳು ದಿನಗಳ ಕಾಲ ಸಮೀಕ್ಷೆ, ಆರೋಗ್ಯ ತಪಾಸಣೆ, ಜಾಗೃತಿ ಕಾರ್ಯಕ್ರಮ

ಸಂಡೂರು, ಮೇ 05..: - ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೋತ್ತರಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ಏಳು ದಿನಗಳ ಗ್ರಾಮೀಣ ಸಮಾಜಕಾರ್ಯ ಶಿಬಿರ-2026ಕ್ಕೆ ಸಂಡೂರುತಾಲೂಕಿನ ಜಿಗೇನಹಳ್ಳಿ ಗ್ರಾಮದಲ್ಲಿಗುರುವಾರ ಚಾಲನೆ ನೀಡಲಾಯಿತು.
ಉದ್ಘಾಟನೆಗೂ ಮುನ್ನಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮತ್ತುಗ್ರಾಮಸ್ಥರುಜಂಟಿಯಾಗಿ ಪಂಜಿನ ಮೆರವಣಿಗೆ ನಡೆಸಿದರು. 'ಶಿಕ್ಷಣ ಎಲ್ಲರ ಹಕ್ಕು', 'ಮೂಢನಂಬಿಕೆ ತೊಲಗಿಸಿ', 'ಸ್ವಚ್ಛಗ್ರಾಮ-ಆರೋಗ್ಯವಂತಗ್ರಾಮ' ಸೇರಿದಂತೆ ವಿವಿಧ ಘೋಷವಾಕ್ಯಗಳೊಂದಿಗೆ ನಡೆದ ಮೆರವಣಿಗೆಗ್ರಾಮಸ್ಥರ ಗಮನ ಸೆಳೆಯಿತು.
ಮೇ 1 ರಿಂದ ಮೇ 7 ರವರೆಗೆ ನಡೆಯಲಿರುವ ಈ ಶಿಬಿರದ ಉದ್ಘಾಟನಾಕಾರ್ಯಕ್ರಮದಲ್ಲಿಗ್ರಾಮದ ಹಿರಿಯರು, ಮುಖಂಡರು, ಎಸ್‍ಡಿಎಂಸಿ ಸದಸ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಬಿರ ಸಂಯೋಜಕ ಹಾಗೂ ವಿಭಾಗದಉಪನ್ಯಾಸಕ ಶ್ರೀ ಲಕ್ಷ್ಮಣ ತೋಳಿ, "ಈ ಏಳು ದಿನಗಳಲ್ಲಿ ಗ್ರಾಮದ ಪ್ರತಿಯೊಂದುಕುಟುಂಬದ ಸಾಮಾಜಿಕ-ಆರ್ಥಿಕ ಸಮೀಕ್ಷೆ, ಗ್ರಾಮದ ಪ್ರಮುಖ ಸಮಸ್ಯೆಗಳ ಅಧ್ಯಯನ, ಉಚಿತಆರೋಗ್ಯತಪಾಸಣಾ ಶಿಬಿರ, ಮಹಿಳೆಯರು, ಮಕ್ಕಳು, ಯುವಕರು, ರೈತರು ಮತ್ತು ಹಿರಿಯ ನಾಗರಿಕರೊಂದಿಗೆ ಪ್ರತ್ಯೇಕಕೇಂದ್ರೀಕೃತ ಗುಂಪು ಚರ್ಚೆಗಳನ್ನು ನಡೆಸಿ, ಅಂತಿಮವಾಗಿಗ್ರಾಮದ ಸಮಗ್ರಅಭಿವೃದ್ಧಿಗೆ ಪೂರಕವಾದ ವರದಿಯನ್ನು ಸಿದ್ಧಪಡಿಸಲಾಗುವುದು" ಎಂದು ವಿವರಿಸಿದರು.
ಗ್ರಾಮದ ಎಸ್‍ಡಿಎಂಸಿ ಅಧ್ಯಕ್ಷ ಶ್ರೀ ಪ್ರಶಾಂತ್ ಮಾತನಾಡಿ, "ಜಿಗೇನಹಳ್ಳಿಯಂತಹ ಗ್ರಾಮದಲ್ಲಿಇಂತಹ ವೈಜ್ಞಾನಿಕಅಧ್ಯಯನಆಧಾರಿತ ಶಿಬಿರದ ಅಗತ್ಯವಿತ್ತು. ವಿದ್ಯಾರ್ಥಿಗಳ ಈ ವಿಶಿಷ್ಟ ಚಟುವಟಿಕೆಗಳು ಗ್ರಾಮದಲ್ಲಿ ಸಕಾರಾತ್ಮಕ ಬದಲಾವಣೆಗೆ ನಾಂದಿಯಾಗಲಿದೆ" ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆಡಾ. ಸುಮ ಕೆ.ಜಿ. ಮಾತನಾಡಿ, "ನಮ್ಮಗ್ರಾಮೀಣ ಶಿಬಿರವು ಕೇವಲ ಸ್ವಚ್ಛತಾಕಾರ್ಯಕ್ಕೆ ಸೀಮಿತವಲ್ಲ. ಇದುಗ್ರಾಮದ ಸಮಗ್ರಅಧ್ಯಯನ, ಅಭಿವೃದ್ಧಿಯಲ್ಲಿನ ಅಡೆತಡೆಗಳ ಗುರುತಿಸುವಿಕೆ ಮತ್ತು ಸೂಕ್ಷ್ಮಯೋಜನೆರೂಪಿಸುವ ಪ್ರಕ್ರಿಯೆ. ನಮ್ಮ ವಿಭಾಗವು ಸಂಡೂರುತಾಲೂಕಿನಲ್ಲಿ ಪ್ರತಿ ವರ್ಷ ಬೇರೆ ಬೇರೆ ಗ್ರಾಮಗಳಲ್ಲಿ ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ" ಎಂದರು.
ಶಿಬಿರದ ಸಹ ಸಂಯೋಜಕಡಾ. ಹನುಮಂತ ಜಿ. ಮಾತನಾಡಿ, "ಶಿಬಿರವೆಂದರೆ ವೇದಿಕೆ ಕಾರ್ಯಕ್ರಮ ಮಾತ್ರವಲ್ಲ, ಗ್ರಾಮದ ನಾಡಿಮಿಡಿತಅರಿಯುವ, ಜನರೊಂದಿಗೆ ಬೆರೆಯುವಕಲಿಕೆಯ ಪ್ರಯೋಗಶಾಲೆ" ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿವಿಭಾಗದಉಪನ್ಯಾಸಕರಾದಡಾ. ಹೊನ್ನೂರಪ್ಪಾಎಸ್, ಶ್ರೀ. ಲಿಂಗರಾಜಹಾಗೂಗ್ರಾಮದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ. ಚಂದ್ರಪ್ಪಾ, ಗ್ರಾಮದ ಮುಖಂಡರಾದ ಶ್ರೀ ಮಂಜುನಾಥ ಪಾಟೀಲ್, ಮಾಜಿಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ಕುಮಾರಿರೇಣುಕಾಕಾರ್ಯಕ್ರಮ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್