LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪರೋಪಕಾರ ಜೀವನದಲ್ಲಿನ ಸುಖ ತೋರಿಸಿಕೊಟ್ಟ ಮಹಾನ್ ಚೇತನ ಪುಟ್ಟರಾಜ ಗವಾಯಿಗಳು: ಸುಶೀಲಾ ಶಿರೂರು. .



ಬಳ್ಳಾರಿ: 17..ಇಲ್ಲಿನ ವಿರಾಟ್ ನಗರದಲ್ಲಿ ಗುರುಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್ ನಿಂದ  ಪದ್ಮಭೂಷಣ ಡಾ.ಪಂಡಿತ ಪಟ್ಟರಾಜ ಕವಿ ಗವಾಯಿಗಳವರ 112 ನೇ ಜಯಂತಿ ಪ್ರಯುಕ್ತ ಗಾನ ತರಂಗ್  ಸಂಗೀತ ಕರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೊಟ್ಟೂರು ಸ್ವಾಮಿ ಮಹಾ ವಿದ್ಯಾಲಯದ ನಿವೃತ್ತ ಉಪನ್ಯಾಸಕರಾ  ಸುಶೀಲಾ ಶಿರೂರು ಮಾತಮಾಡಿ,  ಗವಾಯಿಗಳವರು ಅಂಧರಾದರೂ ಸಂಗೀತ ಪ್ರಪಂಚಕ್ಕೆ ಅಂಧ ಅನಾಥರ ಬಾಳಿಗೆ ಗಾನ ಗಂಧರ್ವರಾದರು. ಅವರು ಪ್ರಪಂಚಕ್ಕೆ ನೀಡಿದ ಸಂಗೀತ ದಾಸೋಹ ಅನ್ನದಾಸೋಹ ಸಾಹಿತ್ಯ ದಾಸೋಹ ದೊಂದಿಗೆ ಸಂಸ್ಕೃತ, ಕನ್ನಡ,  ಹಿಂದಿ ಭಾಷೆಗಳಲ್ಲಿ ಪುರಾಣ ರಚಿಸಿ ತ್ರಿಭಾಷಾ ಕವಿಗಳಾಗಿ ಪದ್ಮಭೂಷಣ ಪ್ರಶಸ್ತಿ ಪಡೆದು ಪರೋಪಕಾರ ಜೀವನದಲ್ಲಿ ನಿಜಸುಖವಿದೆ ಎಂದು ತೋರಿಸಿಕೊಟ್ಟ ಮಹಾನ್ ಚೇತನ ಪುಟ್ಟರಾಜ ಗುರುವರ್ಯರು ಎಂದರು.

ಅವರ ಜೀವನ ಚರಿತ್ರೆ ಯುಗಯುಗಾಂತರ ಕಳೆದರೂ ಅಳಿಸಲಾಗದಂತಹ ಕಲಾವಿದರನ್ನು ಶಿಷ್ಯ ಬಳಗವನ್ನು ನಾಡಿಗೆ ನೀಡಿದ್ದಾರೆ ಅವರ ಸಂಸ್ಕೃತಿ ಸಂಸ್ಕಾರ ನಮಗೆ ಆದರ್ಶಪ್ರಾಯ ಎಂದು ಹೇಳಿದರು.


ಅದ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎನ್.ಡಿ ಯಂಕಮ್ಮ ಮಾತನಾಡಿ, ಸಂಗೀತ ಸಾಹಿತ್ಯದಿಂದ ಮನಸ್ಸು ಜಾಗೃತವಾಗಿ ಚಿಂತೆ ದೂರವಾಗಿ ಚಿಂತನೆ ಹೆಚ್ಚಾಗುತ್ತದೆ ಇದರಿಂದ ಮಾತೃಹದಯ ವ್ಯಕ್ತಿತ್ವ ಅಳವಡಿಸಿಕೊಂಡು ಗುರುಶಿಷ್ಯರ ಸಂಬಂಧ ಪರಂಪರೆ ಬೆಳೆಯುತ್ತಾ ಹೋಗುತ್ತದೆ ಎಂದು ಹೇಳಿದರು.

ಸ್ತ್ರಿಯರು ತಮ್ಮ ಹೆಣ್ಣು ಮಕ್ಕಳನ್ನ ಸಂಗೀತ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೊತ್ಸಾಹಿಸಿ ನಾಡಿನ ಶಿಲ್ಪಿಗಳಾಗಿ ಮಾಡುವ  ತಾಯಂದಿರ ಮುಖ್ಯ ಜವಬ್ದಾರಿ ಎಂದರು.

ಅತಿಥಿಗಳಾಗಿ ಹೆಚ್ ತಿಪ್ಪೇಸ್ವಾಮಿ ಮುದ್ದಟನೂರು ದೊಡ್ಡ ಬಸವ ಗವಾಯಿ ಭಾಗವಹಿಸಿದ್ದರು. ಸಂಗೀತ ಕಾರ್ಯಕ್ರಮವನ್ನ ವೀರೇಶ ದಳವಾಯಿ ಹಾಗೂ ಹುಸೇನಪ್ಪ ಅರಳಿಗೆ ನೂರು ಇವರು ನಡೆಸಿಕೊಟ್ಟರು ಯರೆಗೌಡ ಗಣಿಕೆಹಾಳು ನಬಿಸಾಬ್ ಕಗ್ಗಲ್ಲು, ಶರಸ್ವತಿ ಬಳ್ಳಾರಿ, ಕವಿತಾ ಕಗ್ಗಲ್ಲು ಭಾಗವಹಿಸಿದ್ದರು.

 ಪಾಠಶಾಲೆ ಅನೇಕ ಮಕ್ಕಳಿಂದ ವಚನ ಗಾಯನ ಕಾರ್ಯಕ್ರ ಮನೆರವೇರಿತು ತಬಲಾ ವಾದನ ವೀರೇಶ್ ಕುರುಗೋಡು ನಡೆಸಿಕೊಟ್ಟರು

ಪಂಚಾಕ್ಷರಿ ವಂದಿಸಿದರು. ಚಾಂದ್ ಭಾಷ ಕಾರ್ಯಕ್ರಮ ನಿರೂಪಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್