Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಹಿರೇಮಣೂರ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ

ಇಂಡಿ :  ತಾಲೂಕಿನ ಚಿಕ್ಕಮಣೂರ ಮತ್ತು ಅಫಝಲಪೂರ ತಾಲೂಕಿನ ಹಿರೇಮಣೂರ ಗ್ರಾಮದ ಭೀಮಾ ನದಿ ಮಧ್ಯದಲ್ಲಿರುವ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಏ. ೩೦ ರಿಂದ ಜರಗುವವು.
೩೦ ರಂದು ಗುರುವಾರ ಯಲ್ಲಮ್ಮ ದೇವಿಗೆ ಬಾಸಿಂಗ ಮೆರವಣೆಗೆ ವಿವಿಧ ವಾದ್ಯ ವೈಭವಗಳೊಂದಿಗೆ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ ೯ ಗಂಟೆಗೆ ದೇವಿಯು ಮಂದಿರಕ್ಕೆ ಆಗಮಿಸುವಳು. ರಾತ್ರಿ  ೧೦.೩೦ ಕ್ಕೆ ಪ್ರೇಮಾ ಅಫಝಲಪೂರ ಹಾಗೂ ಸಂಗಡಿಗರಿಂದ ಚೌಡಕಿ ಆಟ ಹಾಗೂ ಚೌಡಕಿ  ಪದಗಳು ಜರಗುವವು. 
ಮೇ ೧ ರಂದು  ಶುಕ್ರವಾರ ಆಗಿ ಹುಣ್ಣಿಮೆಯಂದು ಬೆಳಗ್ಗೆ ೫ ಗಂಟೆಗೆ ಡಾ. ಶಂಬುಲಿಂಗ ಶ್ರೀಗಳಿಂದ   ಪಡಸಾವಳಗಿ ಮತ್ತು ಉದಗಿರಮಠ ಇವರಿಂದ ದೇವಿಯ ರುದ್ರಾಭಿಷೇಕ ಜರುಗುವದು. ೭ ಗಂಟೆಗೆ ದೇವಿಗೆ ವಸ್ತ್ರಾಭರಣ, ೯ ಗಂಟೆಗೆ ದೇವಿಗೆ ನೈವೆಧ್ಯ, ಸಾಯಂಕಾಲ ೪ ಗಂಟೆಗೆ ದೇವಿಯ ಪಲ್ಲಕ್ಕಿ ಮೆರವಣೆಗೆ ನವಿಲು ಕುಣಿತ ಕರಡಿ ಕುಣಿತ ಕುದರೆ ಕುಣಿತ ಗೊಂಬೆ ಕುಣಿತ ಡೊಳ್ಳಿನ ವಾಲಗ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಭೀಮಾ ನದಿಯಲ್ಲಿರುವ ದೇವಿಯ ಮಂದಿರಕ್ಕೆ ತಲುಪುವದು. ೫ ಗಂಟೆಗೆ ಬಾಸಿಂಗ ಮೆರವಣೆಗೆ ದೇವಿಯ ಪಲ್ಲಕ್ಕಿ  ಸ್ವಾಗತಿಸುವದು ೭ ಗಂಟೆಯಿಂದ ೯ ರ ವರೆಗೆ ಮದ್ದು ಸುಡುವದು  ನಂತರ ಪಲ್ಲಕ್ಕಿ ಮೆರವಣೆಗೆ ಗ್ರಾಮದಲ್ಲಿರುವ ದೇವಿಯ  ಮಂದಿರಕ್ಕೆ ಆಗಮಿಸುವದು ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಕುರಿಗಳ ಭವ್ಯ ಜಾತ್ರೆ ನಡೆಯಲಿದೆ.  ಮೇ ೨ ರಂದು ಬೆಳಗ್ಗೆ ೯ ಗಂಟೆಗೆ  ವಿದ್ಯಾಶ್ರೀ ಮಸಬಿನಾಳ ಹರದೇಶ ನಾಗೇಶ  ಹಾಗೂ ಮುಕ್ತುಮಸಾಬ ಸೊನ್ನಾಳ ಅವರಿಂದ  ಗೀ ಗೀ ಪದಗಳು ಜರುಗುವವು. ಸಾಯಂಕಾಲ ೫ ಗಂಟೆಯಿಂದ  ೭ ಗಂಟೆಯ ವರೆಗೆ ಸುಪ್ರಸಿದ್ಧ ಜಂಗೀ ಪೈಲ್ವಾನರಿಂದ  ಕುಸ್ತಿಗಳು ನಡೆಯಲಿವೆ. ಜಾನುವಾರು ಜಾತ್ರೆಯಲ್ಲಿ  ಉತ್ತಮ ಜಾನುವಾರುಗಳಿಗೆ ಯಲ್ಲಮ್ಮ ದೇವಿ ಟ್ರಸ್ಟ  ಕಮಿಟಿ ವತಿಯಿಂದ  ೫ ರಂದು ಬಹುಮಾನ ವಿತರಿಸಲಾಗುವದು. ಜಾತ್ರೆಗೆ ಬರುವ ಭಕ್ತರಿಗೆ ಇಂಡಿಯಿಂದ ನೇರ ಬಸ್ಸಿನ ಸೌಕರ್ಯ ಇರುವದು ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*