LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

14 ಕಾರ್ಖಾನೆಗಳ ಮುಚ್ಚುವಿಕೆ ವಿಳಂಬ ಏಕೆ: ಶಾಂತಯ್ಯ ಅಂಗಡಿ

ಕೊಪ್ಪಳ: ನಗರಸಭೆ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಡೆಸುತ್ತಿರುವ 'ಬಲ್ಡೋಟ ತೊಲಗಿಸಿ, ಕೊಪ್ಪಳ ಉಳಿಸಿ' ಹೋರಾಟದ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ  'ಹಿರೇಬಗನಾಳ, ಅಲ್ಲಾನಗರ, ಹಾಲವರ್ತಿ, ಕಾಸನಕಂಡಿ, ಕುಣಿಕೇರಿ, ಚಿಕ್ಕಬಗನಾಳ ಸುತ್ತಲಿನ 14 ಸ್ಪಾಂಜ್ ಐರನ್ ಕಾರ್ಖಾನೆಗಳ ಮೇಲೆ ಮುಚ್ಚುವ ಕ್ರಮ ಜಾರಿಯಲ್ಲಿ ವಿಳಂಬವೇಕೆ' ಎಂದು ಪ್ರಶ್ನಿಸಿದರು.
ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕ ಬಂದ್ ಮಾಡಬೇಕು. ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಬೇಕು. ಕೇಂದ್ರ ಪರಿಸರ ಇಲಾಖೆಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಕಾರ್ಖಾನೆಗಳ ಸ್ಥಳಾಂತರವಾಗಬೇಕು. ಏಮ್ಸ್ ಸಂಸ್ಥೆಯಿಂದ ಆರೋಗ್ಯ ಸರ್ವೆ ಮತ್ತು ಐಐಎಸ್ಸಿ ಸಂಸ್ಥೆಯಿಂದ ಪರಿಸರ ಹಾನಿ ಸರ್ವೆ ನಡೆಸಬೇಕು. ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಹೋರಾಟ ಮುಂದುವರೆಯುತ್ತಿದೆ.
ಶಾಂತಯ್ಯ ಮಾತು ಮುಂದುವರೆಸಿ 'ಮೂರು ದಶಕಗಳಲ್ಲಿ 22 ಹಳ್ಳಿಗಳ ಜನ ತಮ್ಮ ಸರ್ವಸ್ವವನ್ನು ಕಳೆದುಕೊಂಡಿದ್ದಾರೆ. ಈಗ ಕೊನೆಯದಾಗಿ ಅವರ ಜೀವಕ್ಕೆ ಕುತ್ತು ಬಂದಿದೆ. ಇದುವರೆಗಿನ ಮೂರು ದವಕದಲ್ಲಿ ಸುಧಾರಿಸಿದ ತಂತ್ರಜ್ಞಾನ ಅಳವಡಿಸಿಕೊಳ್ಳದ ಕಾರ್ಖಾನೆಗಳು ಇನ್ನು ಮುಂದೆ ಅಳವಡಿಸಿಕೊಳ್ಳಲು ಹೇಗೆ ಸಾಧ್ಯ. 
ಕಣ್ಣೊರೆಸುವ ತಂತ್ರ ಅನುಸರಿಸುವ ಪರಿಸರ ಇಲಾಖೆಯನ್ನು ಇನ್ನು ಮುಂದೆ ರೈತರು ಸರಳವಾಗಿ ಬಿಡಲಾರರು. ಗುತ್ತೇದಾರರ ಬೆದರಿಕೆಗಳು ಬಾಧಿತ ರೈತರಿಗೆ ಬರುತ್ತಿದ್ದು ಅವರು ಎಲ್ಲವನ್ನು ಎದುರಿಸಲು ಸಿದ್ಧರಾದರೆ ಅವರ ಬೆಂಬಲಕ್ಕೆ ಈ ಹೋರಾಟ ಯಾವತ್ತೂ ನಿಲ್ಲುತ್ತದೆ ಎಂದರು. 14 ಕಾರ್ಖಾನೆಗಳ ಪೈಕಿ ಕೇವಲ ಎರಡಕ್ಕೆ ಮೂಚ್ಚುವ ಪ್ರಕ್ರಿಯೆ ಆರಂಭ ಮಾಡಿ ಈಗ ಇನ್ನೂ ಮೂರು ಕಾರ್ಖಾನೆಗಳ ಮುಚ್ಚುವಿಕೆಯ ಕ್ರಮ ಯಾಕೆ ಜರುಗಿಸುತ್ತಿಲ್ಲ. ಒಂಬತ್ತು ಕಾರ್ಖಾನೆಗಳ ಮೇಲಿನ ಎನ್.ಪಿ.ಡಿ ಆದ ಮೇಲೆ ಮುಚ್ಚುವ ಆದೇಶ ಯಾಕೆ ಮಾಡುತ್ತಿಲ್ಲ. ಇನ್ನು ಮುಂದೆ ಕಾರ್ಖಾನೆಗಳ ಅಟ್ಟಹಾಸ ನಡೆಯದು. ಎಲ್ಲಿಯವರೆಗೆ ಗ್ರಾಮಗಳ ಜನರು ಸಹಿಸಿಕೊಂಡಿರಲು ಸಾಧ್ಯ. ಶೀಘ್ರ ಮುಚ್ಚುವ ಕ್ರಮ ಜರುಗಿಸದಿದ್ದಲ್ಲಿ ಪರಿಸರ ಇಲಾಖೆಗೆ ಬೀಗ ಹಾಕುವ ಹೋರಾಟ ಮಾಡೋಣ ಎಂದರು.
ಧರಣಿಯಲ್ಲಿ ಪ್ರಕಾಶಕ ಡಿ.ಎಂ.ಬಡಿಗೇರ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ರಾಜ್ಯ ರೈತ ಸಂಘದ ಮುಖಂಡ ಭೀಮಸೇನ ಕಲಕೇರಿ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಭಾವಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ತಿಮ್ಮಣ್ಮ ಕಲಕೇರಿ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಗವಿಸಿದ್ದಪ್ಪ ಮಾಲಿಪಾಟೀಲ, ದೊಡ್ಡ ಹನುಮಂತ ಕಲಿಕೇರಿ, ಎಚ್.ಡಿ. ಹೊಂಬಳ, ಶೌಕತ್ ಅಲಿ ನಾಗನೂರು, ನಾಗಪ್ಪ ಕಿನ್ನಾಳ, ಪಂಪಣ್ಣ, ಗವಿಸಿದ್ದಪ್ಪ ಚಿಕೇನಕೊಪ್ಪ, ರತ್ನಮ್ಮ ಮುಂತಾದವರು ಪಾಲ್ಗೊಂಡರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್