LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶ್ರೀ ಖಾಸ್ಗತೇಶ್ವರ ಮಠಕ್ಕೆ ಯಡಿಯಾಪೂರ ಬೆಟ್ಟಿ ವಿಶೇಷ ಪೂಜೆ

ತಾಳಿಕೋಟೆ,  ಐತಿಹಾಸಿಕ ನಗರ ತಾಳಿಕೋಟೆ ಪಟ್ಟಣದಲ್ಲಿರುವ ಖಾಸ್ಗತೇಶ್ವರ ಮಠದ ಕೀರ್ತಿ ರಾಜ್ಯದಾದ್ಯಂತ ಬೆಳಗುತ್ತಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ನಾಯಕ ಬಸನಗೌಡ ಪಾಟೀಲ(ಯಡಿಯಾಪೂರ) ಅವರು ಹೇಳಿದರು.
      ಪಟ್ಟಣದ ಐತಿಹಾಸಿಕ ಶ್ರೀ ಖಾಸ್ಗತೇಶ್ವರ ಮಠಕ್ಕೆ ಬುಧವಾರರಂದು ಭೇಟಿ ನೀಡಿ ಶ್ರೀ ಮಠದ ಪೀಠಾಧಿಕಾರಿ ಸಿದ್ಧಲಿಂಗ ದೇವರಿಂದ ಆಶೀರ್ವಾದ ಪಡೆದುಕೊಂಡು ಅವರು ಅಜ್ಜನ ಜಾತ್ರೆಯ ಕುರಿತು ಮಾತನಾಡಿದರು.
        ಪ್ರಸಾದದ ವ್ಯವಸ್ಥೆ ವಿಶಿಷ್ಟತೆ ಕುರಿತು ಅನಿಸಿಕೆ ಹಂಚಿಕೊಂಡ ಅವರು, ಭಕ್ತರಿಗೆ ಶೆಂಗಾ ಹೋಳಿಗೆ, ಸಜ್ಜಕ, ಜಾಮೂನು, ಮಿರ್ಚಿ ಬಜಿ ಒಳಗೊಂಡು ಅನೇಕ ವಿಶಿಷ್ಠತೆಯ ಪ್ರಸಾದವನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು. ಇಡೀ ತಾಳಿಕೋಟೆ ನಗರ ಅಜ್ಜನ ಜಾತ್ರೆಯ ಸಡಗರದಲ್ಲಿ ಮಿಂದೇಳುತ್ತಿದೆ ಎಂದು ಹೇಳಿದ ಅವರು ಶ್ರೀಮಠದಿಂದ ಕೈಗೊಳ್ಳುವ ಪ್ರತಿ ಕಾರ್ಯಗಳಿಗೆ ನಾನು ಸದಾ ಬೆನ್ನೇಲುಬಾಗಿ ಶ್ರೀಗಳ ಜೊತೆಗೆ ನಿಲ್ಲಲಿದ್ದೇನೆ ಎಂದು ಹೇಳಿದರು. 
      ಇದೇ ಸಮಯದಲ್ಲಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಬಸನಗೌಡ ಪಾಟೀಲ(ಯಡಿಯಾಪೂರ) ಅವರನ್ನು ಸನ್ಮಾನಿಸಿ ಗೌರವಿಸಿದರು.
        ಈ ಸಮಯದಲ್ಲಿ ಮಠದ ಉಸ್ತುವಾರಿ ವೇ.ಮುರಘೇಶ ವಿರಕ್ತಮಠ, ಶರಗೌಡ ಕರಿಭಾವಿ, ಶಳ್ಳಗಿ ರೆಡ್ಡಿ(ನಾಯ್ಕಲ್), ಬಸನಗೌಡ ಮಾಲಿಪಾಟೀಲ, ಅಭಿಷೇಕ ಇದ್ದರು.
---
ಶ್ರೀ ಖಾಸ್ಗತ ಮಠವು ಭಕ್ತರ ಮಠವಾಗಿದೆ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಆದ್ಯಾತ್ಮೀಕ ಶಕ್ತಿಯ ಪರಂಪರೆಯನ್ನು ಹೊಂದಿದ ಮಠವಾಗಿದೆ ಈ ಜಾತ್ರೋತ್ಸವಕ್ಕೆ ಪ್ರತಿವರ್ಷ ಆಗಮಿಸಿ ಶ್ರೀಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ದರ್ಶನವನ್ನು ಪಡೆದುಕೊಂಡಿದ್ದೇನೆ. ಶ್ರೀಮಠದ ವತಿಯಿಂದ ಪ್ರಸಾದದಲ್ಲಿ ವಿಶಿಷ್ಠತೆ ಒಳಗೊಂಡಿರುವದು ಎಲ್ಲ ಭಕ್ತರಿಗೂ ಸಂತಸ ತಂದಿದೆ. 
ಬಸನಗೌಡ ಪಾಟೀಲ(ಯಡಿಯಾಪೂರ)
ಜಿಪಂ ಮಾಜಿ ಅಧ್ಯಕ್ಷ

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ