LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಏರ್ ಇಂಡಿಯಾ ಬೋಯಿಂಗ್ 747 ಯುಗಾಂತ್ಯ: 5 ದಶಕಗಳ 'ಕ್ವೀನ್ ಆಫ್ ಸ್ಕೈಸ್' ಹಾರಾಟ ಸ್ಥಗಿತ!

ಮುಂಬೈ24: ಆಕಾಶದಲ್ಲಿ ಬರೊಬ್ಬರಿ 5 ದಶಕಗಳ ಕಾಲ ಮಹಾರಾಣಿಯಂತೆ ಮೆರೆದ ವಿಮಾನವೊಂದು ತನ್ನ ಹಾರಾಟವನ್ನು ನಿಲ್ಲಿಸಿದ್ದು, ಬೋಯಿಂಗ್ ಸಂಸ್ಥೆಯ B 747 ವಿಮಾನ ತನ್ನ ಹಾರಾಟವನ್ನು ಅಧಿಕೃತವಾಗಿ ನಿಲ್ಲಿಸಿದೆ.

ಒಂದು ಕಾಲದಲ್ಲಿ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯಂತಹ ವಿವಿಐಪಿಗಳನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾದ ವಿಮಾನ ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇತ್ತೀಚೆಗೆ ತನ್ನ ಕೊನೆಯ ಹಾರಾಟ ನಡೆಸಿದೆ.

ಮುಂಬೈ ವಿಮಾನ ನಿಲ್ದಾಣದಿಂದ ತೆರಳಿದ 'ಕ್ವೀನ್ ಆಫ್ ಸ್ಕೈಸ್' ಎಂದೂ ಕರೆಯಲ್ಪಡುವ ಬೋಯಿಂಗ್ 747 ವಿಮಾನ ಅಮೆರಿಕದ ಪೇನ್‌ಫೀಲ್ಡ್‌ಗೆ ತನ್ನ ಕೊನೆಯ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸಿದೆ.

ಅಲ್ಲಿ ಈ ವಿಮಾನವನ್ನು ಡಿಸ್‌ಮ್ಯಾಂಟಲ್ ಮಾಡಬಹುದು ಎಂದು ಹೇಳಲಾಗಿದೆ. ಉಳಿದ ವಿಮಾನಗಳನ್ನು ಈ ಕಂಪನಿಗಳು ಈ ವಿಮಾನವನ್ನು ಕಾರ್ಗೊ ಸರ್ವಿಸ್‌ಗಾಗಿ ಬಳಸುವ ಸಂಭವವಿದೆ. ಉಳಿದ ಎರಡು ಏರ್‌ ಇಂಡಿಯಾ ಬೋಯಿಂಗ್ 747 ವಿಮಾನಗಳನ್ನು ಮುಂಬೈನಲ್ಲಿ ಬಿಡಿಭಾಗಗಳನ್ನಾಗಿ  ಮಾಡಲಾಗುವುದು. ಈ ವಿಮಾನದಲ್ಲಿನ ಬಿಡಿಭಾಗಗಳಲ್ಲಿ ಮರು ಬಳಕೆ ಮಾಡುವ ಪ್ರಕ್ರಿಯೆ ನಡೆಸಲಾಗುವುದು. ವಿಮಾನಗಳಲ್ಲಿ ಸುಮಾರು 800 ರಿಂದ ಸಾವಿರ ಮರುಬಳಕೆ ಮಾಡಬಹುದಾದ ಭಾಗಗಳು ಇರುತ್ತವೆ.

ಏರ್ ಇಂಡಿಯಾ ಬಳಿ 4 ಬೋಯಿಂಗ್ 747 ವಿಮಾನಗಳಿದ್ದು, ನಾಲ್ಕು ವರ್ಷಗಳ ಹಿಂದೆಯೇ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಈ ವಿಮಾನಗಳ ಯುಗಾಂತ್ಯವಾಗಿದ್ದು, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಪೇನ್‌ಫೀಲ್ಡ್‌ಗೆ ಅಂತಿಮ ಪ್ರಯಾಣ ಬೆಳೆಸಿದೆ. ಈ ವಿಮಾನಗಳ ಅಂತಿಮ ವಿದಾಯಕ್ಕಾಗಿ, ಪೈಲಟ್‌ಗಳು 'ವಿಂಗ್ ವೇವ್' ಅನ್ನು ಪ್ರದರ್ಶಿಸಿದ್ದು, ಇದು ವಿಮಾನದ ನಿವೃತ್ತಿ ಅಥವಾ ಅಂತಿಮ ಪ್ರಯಾಣದ ಸಂಕೇತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್