LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಹೆದ್ದಾರಿ ಟೋಲ್ ದರ ಶೇ.14ರಷ್ಟು ಏರಿಕೆ: ಏಪ್ರಿಲ್ 1ರಿಂದ ಜಾರಿಗೆ

ಬೆಂಗಳೂರು,ಮಾ.29: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳ ಟೋಲ್‌ ಅನ್ನು ಏಪ್ರಿಲ್‌ 1ರಿಂದ ಏರಿಕೆ ಮಾಡಲಿದೆ. ಅದೂ ಶೇ. 3ರಿಂದ ಶೇ.14ರವರೆಗೆ ಟೋಲ್‌ ದರಗಳು ಹೆಚ್ಚಳವಾಗಲಿವೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ, ಬೆಂಗಳೂರು ಹೈದ್ರಾಬಾದ್‌, ಹೊಸಕೋಟೆ-ದೇವನಹಳ್ಳಿ ವಲಯದ ಬೆಂಗಳೂರು ಸೆಟಲೈಟ್‌ ರಿಂಗ್‌ ರಸ್ತೆಯ( STRR) ಟೋಲ್‌ ಶುಲ್ಕದಲ್ಲಿ ಏರಿಕೆಯಾಗಲಿದೆ.

ಆರು ತಿಂಗಳ ಹಿಂದೆಯಷ್ಟೇ ಕೆಲವು ಟೋಲ್‌ಗಳ ಏರಿಕೆಯಾಗಿತ್ತು. ಈಗ ವಾರ್ಷಿಕ ಏರಿಕೆಯಂತೆ ಏಪ್ರಿಲ್‌ 1ರಿಂದ ಹೆಚ್ಚಾಗಲಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೋಲ್‌ಸೇನ್‌ ಪ್ರೈಸ್‌ ಇಂಡೆಕ್ಸ್‌ನಂತೆ ಹೊಸ ದರಗಳು ಜಾರಿಯಾಗುತ್ತಿವೆ. ಈಗಿರುವ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಸಲಾಗಿದ್ದು, ಇದು ಮುಂದಿನ ವರ್ಷ 2025ರ ಮಾರ್ಚ್‌ 31ರವರೆಗೆ ಈ ದರ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಹಾಗೂ ಮೈಸೂರು ನಡುವಿನ ಎಕ್ಸ್‌ ಪ್ರೆಸ್‌ ವೇ ಹಾಗೂ ಬೆಂಗಳೂರು ಹೈದ್ರಾಬಾದ್‌ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಟೋಲ್‌ ಗಳಲ್ಲಿ ಶೇ. 3ಹಾಗೂ ಸೆಟಲೈಟ್‌ ರಿಂಗ್‌ ರಸ್ತೆ ಬಳಸುವ ಮಾರ್ಗಕ್ಕೆ ಶೇ. 14ರಷ್ಟು ದರ ಏರಿಕೆಯಾಗಲಿದೆ. ಅದರಲ್ಲೂ ದೊಡ್ಡಬಳ್ಳಾಪುರ- ಹೊಸಕೋಟೆ ಮಾರ್ಗದ ಸೆಟಲೈಟ್‌ ರಿಂಗ್‌ ರಸ್ತೆ ಟೋಲ್‌ ದರ ಆರೇ ತಿಂಗಳಲ್ಲಿ ಎರಡನೇ ಬಾರಿಗೆ ಹೆಚ್ಚಳವಾಗುತ್ತಿದೆ ಎಂದು ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್‌ ಬ್ರಹ್ಮಣನಕರ್‌ ಮಾಹಿತಿ ನೀಡಿದ್ದಾರೆ.

ಹೊಸ ದರದ ಪ್ರಕಾರಣ ಬೆಂಗಳೂರು ನಿಡಘಟ್ಟ ನಡುವಿನ 55.63 ಕಿ. ಮಿ ಮಾರ್ಗಕ್ಕೆ ಕಾರು, ಜೀಪ್‌ ಹಾಗೂ ವ್ಯಾನ್‌ ಗಳಿಗೆ ಒಂದು ಮಾರ್ಗಕ್ಕೆ 170 ರೂ. ಅದೇ ಮಾರ್ಗದಲ್ಲಿ 24 ಗಂಟೆ ಒಳಗೆ ವಾಪಾಸಾದರೆ 255 ರೂ. ಪಾವತಿಸಬೇಕಾಗುತ್ತದೆ. ಈಗ ಇರುವ ದರದಲ್ಲಿ 5 ರೂ. ಏರಿಕೆ ಕಾಣಲಿದೆ. ಇದೇ ಮಾರ್ಗಕ್ಕೆ ಲಘು ವಾಣಿಜ್ಯ ವಾಹನ, ಗೂಡ್ಸ್‌ ಹಾಗೂ ಮಿನಿ ಬಸ್‌ಗೆ 275 ರೂ, 24 ಗಂಟೆ ಒಳಗೆ ವಾಪಾಸಾದರೆ 415 ರೂ. ಪಾವತಿಸಬೇಕಾಗುತ್ತದೆ. ಟ್ರಕ್‌, ಬಸ್‌ಗಳಿಗೆ ಒಂದು ಕಡೆ ಸಂಚಾರಕ್ಕೆ 580ರೂ ಹಾಗೂ 24 ಗಂಟೆ ಒಳಗೆ ವಾಪಾಸಾದರೆ 870 ರೂ. ಪಾವತಿಬೇಕು. ಇದಲ್ಲದೇ ಮಾಸಿಕ ದರದಲ್ಲೂ ಕೊಂಚ ಏರಿಕೆ ಅಂದರೆ 340 ರೂ. ನಿಗದಿ ಮಾಡಲಾಗಿದೆ. ಕಣಮಿಣಿಕೆ ಹಾಗೂ ಶೇಷಗಿರಿಹಳ್ಳಿಯಲ್ಲಿ ಟೋಲ್‌ ಸಂಗ್ರಹ ಕೇಂದ್ರಗಳಿವೆ.

ಅದೇ ರೀತಿ ನಿಡಘಟ್ಟದಿಂದ ಮೈಸೂರುವರೆಗಿನ ಮಾರ್ಗಕ್ಕೆ ಕಾರು, ವ್ಯಾನ್‌ ಜೀಪ್‌ಗಳಿಗೆ ಒಂದು ಮಾರ್ಗದ ಸಂಚಾರಕ್ಕೆ 160 ರೂ. 24 ಗಂಟೆ ಒಳಗೆ ವಾಪಾಸಾದರೆ 240 ರೂ. ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಇಲ್ಲಿಯೂ 5 ರೂ.ಗಳಷ್ಟು ದರ ಹೆಚ್ಚಳವಾಗಲಿದೆ.

ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಹೊಸಕೋಟೆವರೆಗಿನ ಟೋಲ್‌ ಶುಲ್ಕ ಕಾರು, ಜೀಪು, ವ್ಯಾನ್‌ಗೆ ಒಂದು ಮಾರ್ಗಕ್ಕೆ 80 ರೂ. ಹಾಗೂ ಎರಡೂ ಕಡೆ ಸಂಚಾರಕ್ಕೆ 120 ರೂ. ಇರಲಿದೆ. ಮಾಸಿಕ 2,720 ರೂ. ಗಳಿಗೆ ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳು. ಮಿನಿ ಬಸ್‌ಗಳಿಗೆ 130 ರೂ. ವಾಪಾಸ್‌ ಬರುವುದೂ ಸೇರಿ 200 ರೂ. ಆಗಲಿದೆ. ಮಾಸಿಕ 4,395 ರೂ.ಗೆ ಹೆಚ್ಚಿಸಲಾಗಿದೆ. ಟ್ರಕ್‌ ಹಾಗೂ ಬಸ್‌ಗಳಿಗೆ ಒಂದು ಬದಿಗೆ 275 ರೂ, ಎರಡೂ ಕಡೆ ಸಂಚಾರಕ್ಕೆ 415 ರೂ. ಹಾಗೂ ಮಾಸಿಕ 9,205 ರೂ. ಗೆ ಏರಿಸಲಾಗಿದೆ. ನಲ್ಲೂರು ಹಾಊ ದೇವನಹಳ್ಳಿಯಲ್ಲಿ ಟೋಲ್‌ಗಳು ಬರಲಿವೆ.

ಇನ್ನು ರಾಷ್ಟ್ರೀಯ ಹೆದ್ದಾರಿ 7ರ ಟೋಲ್‌ ಅನ್ನು ಕಾರು, ಜೀಪು, ಲಘು ವಾಹನಕ್ಕೆ ಒಂದು ಬದಿ ಸಂಚಾರಕ್ಕೆ 115 ರೂ. ಹಾಗೂ ಎರಡು ಕಡೆ ಸಂಚಾರಕ್ಕೆ 175 ರೂ, ನಿಗದಿಮಾಡಲಾಗಿದೆ. ಬಾಗೇಪಲ್ಲಿ ಶುಲ್ಕ ಸಂಗ್ರಹ ಘಟಕವಿದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್