LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ತಾಯಿ ಚಾಮುಂಡೇಶ್ವರಿ ಆರಾಧನೆಯಿಂದ ಸಂಕಲ್ಪ ಸಿದ್ಧಿ ಶತಸಿದ್ಧ: ಆರಾದ್ರಿಮಠ ಶಾಸ್ತ್ರಿಗಳು


ಬೈಲಹೊಂಗಲ-ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ಆರಾಧನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳು,ಸಂಕಲ್ಪ ಪೂರ್ಣಗೊಳ್ಳುವುದು ನೂರಕ್ಕೆ ನೂರರಷ್ಟು ಸಿದ್ಧವೆಂದು ಧಾರ್ಮಿಕ ದತ್ತಿ ಪರಿಷತ್ ಮುಜರಾಯಿ ಇಲಾಖೆ ಸದಸ್ಯರಾದ ಡಾ.ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು ನುಡಿದರು.


      ಪಟ್ಟಣದ ಬಸ್ ನಿಲ್ದಾಣದ ಹಿಂದುಗಡೆಯ ಕುಲಕರ್ಣಿ ಗಲ್ಲಿಯ ಹುಡೇದ ಬಾವಿ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ತಾಯಿ ಚಾಮುಂಡೇಶ್ವರಿ ದೇವಸ್ಥಾನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ ಇಂದಿನ ಮೊಬೈಲ ಯುಗದಲ್ಲಿ ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಿಸುವ ಭರದಲ್ಲಿ ನಮ್ಮ ಸನಾತನ

ಧರ್ಮದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕುಲಕರ್ಣಿ ಗಲ್ಲಿಯ ಯುವಕರ ತಂಡವೊಂದು ಸಮಾನ ಮನಸ್ಕರಾಗಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ ನಿರ್ಮಿಸುವುದರ ಮೂಲಕ ಧರ್ಮ ಜಾಗೃತಿಯ ಕಡೆಗೆ ಗಮನ ಹರಿಸಿದ್ದು ವಿಶೇಷ.


ನವರಾತ್ರಿ ಪವಿತ್ರ ಸಂದರ್ಭದಲ್ಲಿ ಭಕ್ತರಿಂದ ದೇವಾಲಯ ನಿರ್ಮಿಸಿಕೊಂಡು ಈ ಭಾಗದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರವಾಗಿಸಲು ಸಂಕಲ್ಪ ಮಾಡಿರುವ ಮುನ್ಸೂಚನೆ ನೀಡಿದ್ದಾಳೆ.ತಾಯಿ ಚಾಮುಂಡೇಶ್ವರಿಯನ್ನು ನಿರ್ಮಲ ಭಕ್ತಿಯಿಂದ ಆರಾಧಿಸುವ ಮೂಲಕ ಭಕ್ತರು ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗುವಂತೆ ತಿಳಿಸಿದರು.


        ಸಾನಿಧ್ಯ ವಹಿಸಿದ್ದ ವೇ. ಮೂ. ಮಹಾಂತಯ್ಯ ತೆಗ್ಗಿನಮಠ ಶಾಸ್ತ್ರಿಗಳು ಮಾತನಾಡಿ ಸನಾತನ ಹಿಂದೂ ಧರ್ಮದಲ್ಲಿ ನವರಾತ್ರಿ ದಿನಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.ಪುರಾಣದಲ್ಲಿ ಹೇಳುವ ಹಾಗೆ ದೇವತೆಗಳ ಕೋರಿಕೆಯಂತೆ ಮಹಿಷಾಸುರನನ್ನು ತಾಯಿ ಚಾಮುಂಡೇಶ್ವರಿಯು ಸಂಹರಿಸಿ ದೇವತೆಗಳಿಗೆ ಅನುಗ್ರಹಿದ ಹಾಗೆ ನವರಾತ್ರಿಯಲ್ಲಿ ಅಮ್ಮನವರ ಆರಾಧನೆಯಿಂದ ನಮ್ಮ ಕಷ್ಟಗಳು ಮಂಜಿನಂತೆ ಕರಗುವುದು ನಿಶ್ಚಿತ.


ಚಾಮುಂಡೇಶ್ವರಿ ಅಮ್ಮನವರು ಈ ಭಾಗದಲ್ಲಿ ನೆಲೆನಿಂತಿರುವುದು ಈ ಭಾಗದ ಭಕ್ತರ ಪೂರ್ವಜನ್ಮದ ಪುಣ್ಯದ ಫಲವೆಂದು ನುಡಿದರು.   ವೇ.ಮೂ.ಸಂಜಯ ಪತ್ರಿಮಠ ಶಾಸ್ತ್ರಿಗಳು ಅಮ್ಮನವರ ಗದ್ದುಗೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ,ವಿವಿಧ ಪುಷ್ಪಗಳಿಂದ ಅಲಂಕರಿಸಿ ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಪೂಜಾ ಕೈoಕರ್ಯ ನೆರವೇರಿಸಿದರು.

       ಇದೇ ವೇಳೆ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಬೆಂಗಳೂರಿನ ಶನೇಚ್ಚ್ಚರ ಮಂದಿರದ ಅರ್ಚಕರಾದ ಬಸವರಾಜ ಹಿರೇಮಠ ಶಾಸ್ತ್ರೀಗಳು,ಹಿರಿಯರಾದ ಬಾಳಪ್ಪ ಕುರುಬರ,ಮುಖಂಡರಾದ ಸಿದ್ದು ಕಣಬರಗಿ,ಸಂಗಮೇಶ ಹುಲಗನ್ನವರ,ಬಸವರಾಜ ಮಾಟೊಳ್ಳಿ,ಶಿವು ಜೋಳದ,ಕಿರಣ ಶಿರವಂತಿ,ಶ್ರೀಶೈಲ ಶಿಲ್ಲೇದಾರ, ಸಿದ್ದು ಶಿರವಂತಿ,ಭೀಮಸೇನ ಕಂಬಾರ,ಕಿರಣ ಚಪಳಿ ಸೇರಿದಂತೆ ಚಾಮುಂಡೇಶ್ವರಿ ದೇವಸ್ಥಾನದ ಕಮಿಟಿ ಸದಸ್ಯರು, ಸದ್ಭಕ್ತರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್