LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಭಾರತೀಯ ಸೇನೆ ತಲುಪಿದ ನಾಗಾಸ್ತ್ರ : ಪ್ರಬಲ ಡ್ರೋನ್ ಅಸ್ತ್ರ

ನವದೆಹಲಿ, ಜೂನ್ 14: ಸಂಪೂರ್ಣ ದೇಶೀಯವಾಗಿ ತಯಾರಿಸಲಾಗಿರುವ ನಾಗಾಸ್ತ್ರ (Nagastra-1) ಎಂಬ ಪ್ರಬಲ ಮಿಲಿಟರಿ ಡ್ರೋನ್​ಗಳು ಭಾರತೀಯ ಸೇನೆಗೆ ಸರಬರಾಜಾಗಿವೆ.

ನಾನಾಸ್ತ್ರ-1 ನ ಮೊದಲ ಬ್ಯಾಚ್ ಡ್ರೋನ್​ಗಳು ಸೇನೆಗೆ ಸಿಕ್ಕಿವೆ. ಯಾವುದೇ ರಿಸ್ಕ್ ಇಲ್ಲದೇ ಉಗ್ರರ ನೆಲೆಗಳು, ಸ್ಥಳಗಳ, ವ್ಯಕ್ತಿಗಳ ಮೇಲೆ ಕ್ಷಿಪ್ರವಾಗಿ ಮತ್ತು ನಿಖರವಾಗಿ ದಾಳಿ ಮಾಡಲು ಈ ಡ್ರೋನ್​ಗಳು ಹೇಳಿ ಮಾಡಿಸಿವೆ.

ಈ ಶ್ರೇಣಿಯ ಮತ್ತು ಸಾಮರ್ಥ್ಯದ ಡ್ರೋನ್ ಅನ್ನು ಭಾರತದಲ್ಲಿ ತಯಾರಿಸಲಾಗಿರುವುದು ಇದೇ ಮೊದಲು. ಮಹಾರಾಷ್ಟ್ರದ ನಾಗಪುರದಲ್ಲಿರುವ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ಎಕನಾಮಿಕ್ ಎಕ್ಸ್​ಪ್ಲೋಸಿವ್ಸ್ ಲಿ  ಈ ಹೈಟೆಕ್ ಡ್ರೋನ್ ಅನ್ನು ತಯಾರಿಸಿದೆ.

ನಾಲ್ಕು ವರ್ಷಗಳ ಹಿಂದೆಯೇ ಈಲ್ ಸಂಸ್ಥೆ ತನ್ನ ಈ ಡ್ರೋನ್​ಗಳ ಡೆಮೋವನ್ನು ಸೇನೆಗೆ ತೋರಿಸಿತ್ತು. 480 ಡ್ರೋನ್​ಗಳಿಗೆ ಆರ್ಡರ್ ಸಿಕ್ಕಿತ್ತು. ಈಗ ಮೊದಲ ಬ್ಯಾಚ್​ನಲ್ಲಿ 120 ಡ್ರೋನ್​ಗಳು ತಯಾರಾಗಿ ಸೇನೆಗೆ ಕಳುಹಿಸಲಾಗಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಈ ಡ್ರೋನ್​ಗಳು ಮುಕ್ಕಾಲು ಪಾಲು ದೇಶೀಯವಾಗಿ ನಿರ್ಮಾಣವಾಗಿವೆ. ಕೆಲ ಬಿಡಿಭಾಗಗಳನ್ನಷ್ಟೇ ಹೊರಗಡೆಯಿಂದ ತರಿಸಲಾಗಿದೆ. ಶೇ. 74ರಷ್ಟು ಭಾಗವನ್ನು ದೇಶೀಯವಾಗಿ ನಿರ್ಮಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್