LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಗವಿಮಠದ ಮಹಾದಾಸೋಹದಲ್ಲಿ ಮೈಸೊರ್ ಪಾಕ್ ತಯಾರಿಕೆ

ಕೊಪ್ಪಳ: ಶ್ರೀ ಗವಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಮಹಾದಾಸೋಹಕ್ಕೆ ಅನೇಕ ಭಕ್ತರು ವಿವಿಧ ರೀತಿಯ ಖಾದ್ಯಗಳ ಸೇವೆ ಸಮರ್ಪಿಸುವುದು ಜಾತ್ರ ಮಹೋತ್ಸವದ ವಿಶೇಷತೆ. ಇಂದು ಸಿಂಧನೂರಿನ ಗೆಳೆಯರ ಬಳಗದ ವತಿಯಿಂದ ದಿನಾಂಕ ೫ ಮತ್ತು ೬ ರಂದು ಭಕ್ತರಿಗೆ ಮೈಸೂರು ಪಾಕ್ ಸವಿಯಲು ತಯಾರಿಕೆಯಲ್ಲಿ ತೊಡಗಿದ್ದಾರೆ. ಇಂದು ದಿನಾಂಕ ೦೩.೦೧.೨೦೨೬ ರಂದು ಬೆಳಗ್ಗೆ ೬ ಗಂಟೆಯಿಂದ ತಯ್ಯಾರಿಕೆಯಲ್ಲಿ ತೊಡಗಿದ್ದು, ಇದು ರಾತ್ರಿ ೧೧ರವರೆಗೆ ಮತ್ತು ನಾಳೆಯು ಸಹ ಮುಂದುವರಿಯಲಿದೆ.



ಮೈಸೂರು ಪಾಕ್ ತಯ್ಯಾರಿಸುವುದಕ್ಕೆ ೬೦ಕ್ವಿಂಟಲ್ ಸಕ್ಕರೆ, ೫೦೦೦ ಲೀಟರ್ ಅಡುಗೆ ಎಣ್ಣೆ, ೩೦ಕ್ವಿಂಟಲ್ ಕಡಲೆ ಹಿಟ್ಟು, ೫ಕ್ವಿಂಟಲ್ ಮೈದ ಹಿಟ್ಟು, ೩೦ ಕ್ವಿಂಟಲ್ ತುಪ್ಪ, ೫೦ಕೆಜಿ ಯಾಲಕ್ಕಿ ಸಾಮಗ್ರಿಗಳೊಂದಿಗೆ ಖಾದ್ಯ ಸಿದ್ಧಪಡಿಸುತ್ತಿದ್ದಾರೆ. ಅಂದಾಜು ಹತ್ತರಿಂದ ಹನ್ನೆರಡು ಲಕ್ಷ ಜನ ಇದನ್ನು ಸೇವಿಸಬಹುದಾಗಿದೆ. ತಯಾರಿಸುವುದಕ್ಕೆ ಅಥಣಿ, ಧನಾವರ, ಮಸ್ಕಿ, ಗಬ್ಬುರ್, ಬಳಗಾನೂರ, ತಾವರಗೇರಾ ಮುಂತಾದ ೧೦೦ಕ್ಕೂ ಹೆಚ್ಚು ಬಾಣಸಿಗರು ಆಗಮಿಸಿ ತಯ್ಯಾರಿಕೆಯಲ್ಲಿ ತೊಡಗಿದ್ದಾರೆ. ಅವರಿಗೆ ಸಾಯಕರಾಗಿ ಮತ್ತು ಇತರೆ ವ್ಯವಸ್ಥೆಗಾಗಿ ೨೦೦ಕ್ಕೂ ಹೆಚ್ಚು ಜನ ತಯ್ಯಾರಿಕೆ ಸೇವೆಯಲ್ಲಿ ತೊಡಗಿ ಕೊಂಡಿರುತ್ತಾರೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್