LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮಾರ್ಚ 16 ರಿಂದ 21 ರವರೆಗೆ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರೋತ್ಸವ








 ನೇಸರಗಿ. ಇಲ್ಲಿನ ಪ್ರತಿಷ್ಠಿತ ಶ್ರೀ

ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠ ನೇಸರಗಿ ಇದರ  ಜಾತ್ರಾ ಮಹೋತ್ಸವವು ಮಾರ್ಚ 16 ರಿಂದ ಪ್ರಾರಂಭವಾಗಿ ಮಾರ್ಚ 21 ರ ವರೆಗೆ ನೆರವೇರಲಿದ್ದು, ಜಾತ್ರೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶ್ರೀ ಶಿವಾನಂದ ಭಾರತಿ  ಮಹಾಸ್ವಾಮಿಗಳು ವಹಿಸುವರು, ಸಾನಿಧ್ಯವನ್ನು ನೇಸರಗಿ- ಮಲ್ಲಾಪೂರ  ಗಾಳೇಶ್ವರ ಮಠದ ಶ್ರೀ ಚಿದಾನಂದ ಶ್ರೀಗಳು ವಹಿಸುವರು. ಮಾ. 16 ರಂದು ಬೆಳಿಗ್ಗೆ  ಮೂರ್ತಿಗೆ ರುದ್ರಾಭಿಷೇಕ, ಪೂಜಾ ಸಮಾರಂಭ, 3 ಘಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಮುತ್ತೈದೆಯರಿಂದ ಕುಂಭಮೇಳ, ಪಲ್ಲಕ್ಕಿ ಉತ್ಸವ ಜರುಗುವದು, ಗ್ರಾಮದೇವಿಗೆ ಉಡಿ ತುಂಬುವದು ಸಂಜೆ 5 ಘಂಟೆಗೆ ಕಳಸರೋಹಣ ನೆರವೇರಲಿದೆ. ಮಾರ್ಚ 16 ರಿಂದ 21 ರವರೆಗೆ ಪ್ರತಿದಿನ ನಾಡಿನ ಪೂಜ್ಯರಿಂದ ಆದ್ಯಾತ್ಮ ಪ್ರವಚನ, ಮಹಾಪ್ರಸಾದ  ನೆರವೇರಲಿದೆ.ದಿ. 20-03-2026 ರಂದು ಸಂಜೆ 4 ಘಂಟೆಗೆ ಮಹಾರಥೋತ್ಸವ ನಡೆಯಲಿದೆ. ಮಾ. 21 ರಂದು ಕಳಸ ಇಳಿಸುವದು, ಲಕ್ಷ ದೀಪೋತ್ಸವ, ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರಿಂದ ನೂತನ ಕಟ್ಟಡ ಉದ್ಘಾಟನೆ, ಮಹಾಪ್ರಸಾದ ಜರುಗುವದು. ಪ್ರತಿದಿನ ಗ್ರಾಮದ ಭಜನಾ ಮಂಡಳಗಳಿಂದ ಭಜನೆ ಜರುಗುವದು.ಈ ಜಾತ್ರಾ ಮಹೋತ್ಸವಕ್ಕೆ ಆದ್ಯಾತ್ಮ ಪ್ರವಚನಕ್ಕೆ ಹುಣಶ್ಯಾಳ ಪಿ ಜಿ ಕೈವಲ್ಯಾಶ್ರಮದ ನಿಜಗುಣ ಶ್ರೀಗಳು, ಅವರೊಳ್ಳಿಯ ಚನ್ನಬಸವ ದೇವರು, ದತ್ತವಾಡದ ಹೃಷಕೇಶಾನಂದ ಮಹಾರಾಜರು,ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಶ್ರೀಗಳು, ಯರಗೋಪ್ಪದ ಶಿವಪ್ಪಜ್ಜನವರು, ಸವಟಗಿಯ ಲಿಂಗಯ್ಯ ಸ್ವಾಮಿಗಳು, ಮದನಬಾವಿಯ ಮಾತೋಶ್ರೀ ಶಿವದೇವಿ  ತಾಯಿ,ಹಾರುಗೋಪ್ಪದ ಮಾತೋಶ್ರೀ  ಶಿವಯೋಗಿಣಿ ತಾಯಿ ಅವರುಗಳು  ಭಾಗವಹಿಸಲಿದ್ದಾರೆ.

       ಟ್ರ್ಯಾಕ್ಟರ ಮಾಲೀಕರ ಸಂಘ ನೇಸರಗಿ ಇವರ ಆಶ್ರಯದಲ್ಲಿ ಸೋಮವಾರ ದಿ.16-3-2026 ರಂದು ಮದ್ಯಾಹ್ನ 12-30 ಕ್ಕೆ ಟ್ರ್ಯಾಕ್ಟರ ರಿವರ್ಸ್ ಸ್ಪರ್ಧೆ ಏರ್ಪಡಿಸಲಾಗಿದೆ.ಮಂಗಳವಾರ ದಿ. 17 ಹಾಗೂ ಬುಧವಾರ ದಿ. 18 ರಂದು ಖಾಲಿ ಗಾಡಾ ಚಕ್ಕಡಿ ಓಡಿಸುವ ಶಾರ್ಯತ್ತು ಏರ್ಪಡಿಸಲಾಗಿದೆ. ಮೊದಲನೇ ಬಹುಮಾನ ರೂ. 25,000/- ಎರಡನೇ ಬಹುಮಾನ ರೂ. 20,000/-, ಮೂರನೇ ಬಹುಮಾನ ರೂ. 18,000/- ಹೀಗೆ 12 ಜೋಡಿ ಎತ್ತುಗಳಿಗೆ ಬಹುಮಾನ ನೀಡಲಾಗುವದು ಎಂದು ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರಾ ಕಮಿಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಟ್ರ್ಯಾಕ್ಟರ್ ರಿವರ್ಸ್ ಸ್ಪರ್ಧೆಗೆ ಮೊ. ನಂ 9740754195,8431401312 ಹಾಗೂ  ಖಾಲಿ ಗಾಡಾ ಚಕ್ಕಡಿ ಸ್ಪರ್ಧೆಗೆ ಮೊ ನಂ.6363713660,9148323584 ಈ ನಂಬರಗೆ ಸಂಪರ್ಕಿಸಲು ಕೋರಲಾಗಿದೆ.











Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್