LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಎಸ್‌ಪಿ ಪವನ್‌ನೆಜ್ಜೂರ ಅಮಾನತು ಎಷ್ಟರ ಮಟ್ಟಿಗೆ ಸರಿ: ಶ್ರೀರಾಮುಲು


ಬಳ್ಳಾರಿ,ಜ,೦೩:  ಗಲಭೆಗೆ ಕಾರಣಭೂತರಾದ ಭರತ್‌ರೆಡ್ಡಿ ಅವರ ಕಟ್ಟಾಳು ಸತೀಶ್‌ರೆಡ್ಡಿ ಅವರ ಬೆಂಬಲಿಗರು ಅವರನ್ನು ಬಂಧಿಸುವುದು ಬಿಟ್ಟು, ಎಸ್‌ಪಿ ಪವನ್ ನೆಜ್ಜೂರ ಅವರನ್ನು     ಅಮಾನತು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಸಚಿವ ಶ್ರೀರಾಮುಲು ಪ್ರಶ್ನಿಸಿದರು.


ನಗರದ ಹವಾಂಬಾವಿಯಲ್ಲಿರುವ ಜನಾರ್ಧನರೆಡ್ಡಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಎಸ್‌ಪಿ ಅಧಿಕಾರ ಸ್ವೀಕಾರ ಮಾಡಿ ೧೨ ತಾಸಿನಲ್ಲಿ ಅವರ ಸೇವೆಯನ್ನು ಅಮಾನತು ಕೇವಲ ಕಣ್ಣುರೆಸು ತಂತ್ರವಾಗಿದೆ. ಸಿಎಂ ಬಗ್ಗೆ ಗೌರವವಿದೆ. ಎಸ್‌ಪಿ ಅವರಿಗೆ ಸಮಯ ನೀಡಬೇಕೆತ್ತು. ತರಾತುರಿಯಲ್ಲಿ ಏಕೆ ? ಮೇಲ್ನೋಟಕ್ಕೆ ತಪ್ಪು ಕಣ್ಣಿರೆಸುವ ತಂತ್ರ ಮಾಡಿದ್ದಾರೆ. ಬಳ್ಳಾರಿ ಡಿವೈಎಸ್‌ಪಿ ಅವರು ಗಲಭೆ ತಡೆದಿದ್ದರೆ ಯಾವುದೇ ಗಲಭೆ ಸಂಭವಿಸುತ್ತಿರಲಿಲ್ಲ, ಯುವಕ ಸಾವಿಗೆ ಡಿವೈಎಸ್‌ಪಿ ನಂದಾರೆಡ್ಡಿ ನೇರಕಾರಣ.  ಡಿವೈಎಸ್ಪಿ ಅವರನ್ನು ಸಸ್ಪೆಂಡ್ ಮಾಡಬೇಕು. ಗಲಭೆಗೆ ಶಾಮೀಲಾದವರನ್ನು ಬಂಧಿಸಿ ಕ್ರಮ ತೆಗದುಕೊಳ್ಳಬೇಕು. ರಿಪಬ್ಲಿಕ್ ಬಳ್ಳಾರಿ ಅಲ್ಲ, ರಿಪಬ್ಲಿಕ್ ಕಾಂಗ್ರೆಸ್ ಮಾಡಿದ್ದಾರೆ. ಗೃಹಸಚಿವರೇ ನಾವು ಎಚ್ಚರ ತಪ್ಪಿದ್ದರೆ, ನಾವು ಉಳಿತಾ ಇದ್ದಿಲ್ಲ ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಡಿವೈಎಸ್‌ಪಿ ಅವರು ರಕ್ಷಣೆ ಮಾಡಿಕೊಂಡು ಬಂದು ಗಲಭೆಗೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿದರು. ದ್ವೇಷ ಭಾಷಣ ಮಸೂದೆ ತದನಂತರ ಮೊದಲ ಬಳ್ಳಾರಿ ನಗರ ಶಾಸಕ ಭರತ್‌ರೆಡ್ಡಿ ಆಗಿದ್ದಾರೆ. ಗೂಂಡರಾಜ್ಯವಾಗಿ ಪರಿವರ್ತನೆ ಆಗುತ್ತದೆ. ಕೊಲೆಗೆ ಸಂಚು ರೂಪಸಿದವರನ್ನು ಅರೆಸ್ಟ್ ಮಾಡಲಾಗಿಲ್ಲ ಎಂದರು.


ಗಲಭೆಗೆ ಕಾರಣರಾದವರನ್ನು ಬಂಧಿಸಿದಿದ್ದರೆ ಬೆಳ್ಳಾರಿಯಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುತ್ತೇವೆ. ಕೆಜೆಹಳ್ಳಿ- ಡಿಜೆಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಧ್ವಂಸ ರೀತಿಯಲ್ಲಿ ಬಳ್ಳಾರಿಲ್ಲಿ ಕೂಡಾ ಹಿಂದುಳಿದ ನಾಯಕ ಜನಾರ್ಧನರೆಡ್ಡಿ ವಿರುದ್ಧ ಬೆದರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಜನಾರ್ಧನರೆಡ್ಡಿ ಅವರಿಗೆ ಭದ್ರತೆ ನೀಡಬೇಕು. ಗಲಭೆಕೋರರನ್ನು ಅರೆಸ್ಟ್ ಮಾಡಿಲ್ಲ ಅಂದ್ರೇ ಪಾದಯಾತ್ರೆ ತಪ್ಪು ಮಾಡಿದರೆ ಜೈಲುಶಿಕ್ಷೆ ಆಗಲೇಬೆಕು. ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸತೀಶ್‌ರೆಡ್ಡಿ ಅಂಗರಕ್ಷರನ್ನು ಬಂಧನವಾಗಬೇಕು ಎಂದರು.


ಗAಗಾವತಿ ಶಾಸಕ ಜನಾರ್ಧನರೆಡ್ಡಿ ಮಾತನಾಡಿ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ನಮ್ಮಹತ್ರ ಬೆಳೆದ ಹುಡುಗ, ನಮ್ಮ ಹತ್ತಿರ ಚನ್ನಾಗಿ ಮಾತನಾಡುತ್ತಿದ್ದ, ಆದರೆ ಇತ್ತಿಚಿನ ದಿನಗಳಲ್ಲಿ ಇತನ ಬೆಳವಣಿಗೆ ಬೇರೆಯಾಗಿದ್ದು, ಇತರ ಇಲ್ಲಸಲ್ಲದ ಮಾತಗಳನ್ನು ಆಡುವುದು ಶೋಭೆ ತರುವುದಿಲ್ಲ. ಆಗಾಗಿ ಇನ್ನೂಮುಂದೆ ಇತರ ಮಾತನಾಡಿದಲ್ಲಿ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಗುಡುಗಿದರು. ನಾಗೇಂದ್ರನ ಮೇಲೆ ಸಾಕಷ್ಟು ಪ್ರಕರಣಗಳಿದ್ದು, ಮುಂದಿನ ದಿನಗಳಲ್ಲಿ ಕೂಡಾ ಜನರೇ ನಿರ್ಧಾರ ಮಾಡುತ್ತಾರೆ. ೨೦೨೮ರಲ್ಲಿ ರಾಜಕೀಯ ಶಾಶ್ವತವಾಗಿ ಮುಗಿಯುತ್ತದೆ. ರಾಜ್ಯದಲ್ಲಿ, ವಾಲ್ಮೀಕಿ ಜನಾಂಗಕ್ಕೆ ಗೊತ್ತು ರಾಮುಲು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕಾಲಿನ ಧೂಳಿಗೆ ಸಮವಲ್ಲ ಎಂದು ನಾಗೇಂದ್ರ ವಿರುದ್ಧ ಗುಡುಗಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಶೇಖರರೆಡ್ಡಿ, ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಮಾರುತಿ ಪ್ರಸಾದ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ಕಾರ್ಪೋರೆಟರ್ ಪಾಲಾಣ್ಣ, ಮಾಜಿ ಸಂಸದ ಪಕ್ಕಿರಪ್ಪ, ವೆಂಕಟರಮಣ, ಕೆ.ಎಸ್.ದಿವಾಕರ್ ಮತ್ತಿತರರ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ