LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮಲೆನಾಡಲ್ಲೇ 40 ಡಿಗ್ರಿ ತಾಪಮಾನ; ಪಕ್ಷಿಪ್ರೇಮಿಗಳಿಂದ ಹಕ್ಕಿಗಳಿಗೆ ನೀರು, ಆಹಾರ

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಈ ಭಾರಿ ತಾಪಮಾನ 40 ಡಿಗ್ರಿ ತಲುಪಿದೆ. ಜನರಷ್ಟೆ ಅಲ್ಲದೆ, ಪಕ್ಷಿಗಳೂ ಸಹ ಬಿಸಿಲಿನ ಧಗೆ ತಾಳಲಾಗದೆ ಪರದಾಡುತ್ತಿವೆ. ಇದನ್ನು ಮನಗಂಡ ಶಿವಮೊಗ್ಗದ ಪಕ್ಷಿ ಪ್ರೇಮಿಗಳು ಪಕ್ಷಿಗಳಿಗೆ ನೀರು ಹಾಗೂ ಆಹಾರ (ಕಾಳು) ಇಡುವ ಮೂಲಕ ತಮ್ಮ ಪರಿಸರಪ್ರೇಮ ಮೆರೆದಿದ್ದಾರೆ.


ಶಿವಮೊಗ್ಗದ ಡಿ.ಕೆ. ಶಿವಕುಮಾರ್​​​ ಬ್ರಿಗೇಡ್​​ ವಿವಿಧ ಸಂಘಟನೆಗಳ ಜೊತೆ ಸೇರಿ ಪಕ್ಷಿಗಳಿಗೆ ನೀರು ಆಹಾರ ಇಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತುತ್ತವೆ. ಮನುಷ್ಯರಾದರೆ ಕುಡಿಯಲು ನೀರು ಕೇಳಿ ಪಡೆಯುತ್ತಾರೆ.‌ ಆದರೆ, ಪಕ್ಷಿಗಳು ಹಾಗೆ ಮಾಡಲು ಸಾಧ್ಯವಿಲ್ಲ.‌ ಇದರಿಂದ ಪಕ್ಷಿಗಳಿಗೆ ಕುಡಿಯಲು ನೀರು ಹಾಗೂ ಆಹಾರವನ್ನು ಇಡಲಾಗುತ್ತಿದೆ. ಬ್ರಿಗೇಡ್​ನ ಸದಸ್ಯರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿನ ಮರಗಳಿಗೆ ನೀರು ಹಾಗೂ ಆಹಾರವನ್ನು ನೇತು ಹಾಕಿದರು. ಇದನ್ನು ಎರಡು ದಿನಕ್ಕೊಮ್ಮೆ ನೋಡಿಕೊಂಡು ಅದರಲ್ಲಿ ನೀರು ಕಡಿಮೆಯಾದರೆ, ಕಾಳು ಖಾಲಿಯಾದರೆ ಹಾಕುವ ಕೆಲಸ ಮಾಡುತ್ತಿದ್ದಾರೆ.


ಬಿಸಾಡುವ ಬಾಟಲಿ, ತಟ್ಟೆ ಬಳಕೆ: ಪಕ್ಷಿಗಳಿಗೆ ನೀರು ಹಾಗೂ ಆಹಾರ ನೀಡಲು ಎರಡು ಲೀಟರ್​ ಜ್ಯೂಸ್​​ನ ಖಾಲಿ ಬಾಟಲಿ ತೆಗೆದುಕೊಂಡು, ಅದರಲ್ಲಿ ಅರ್ಧದಷ್ಟು ಕಾಳನ್ನು ಹಾಕಿ, ಬಾಟಲಿಗೆ ಮೂಕ್ಕಾಲು ಭಾಗದಷ್ಟು ನೀರನ್ನು ಹಾಕಿಡಲಾಗುತ್ತಿದೆ. ಬಾಟಲಿ ಕೆಳಗೆ ಪ್ಲಾಸ್ಟಿಕ್ ತಟ್ಟೆ ಹಾಕಿ ಬಾಟಲಿಗೆ ತಂತಿಯಿಂದ ಮೇಲಕ್ಕೆ ಕಟ್ಟಿ, ಅದಕ್ಕೆ ಉದ್ದದಾದ ದಾರದಿಂದ ಮರಕ್ಕೆ ಕಟ್ಟಲಾಗುತ್ತಿದೆ. ಪಕ್ಷಿಗಳು ಬೆಳಗ್ಗೆ ಸಂಜೆ ಈ ಭಾಗದಲ್ಲಿ ಹೆಚ್ಚು ಹಾರಾಟ ನಡೆಸುವುದರಿಂದ ಅವುಗಳಿಗೆ ಅನುಕೂಲವಾಗಲಿದೆ.‌ ಮರದಲ್ಲಿಯೇ ಅದನ್ನು‌ ಕಟ್ಟುತ್ತಿರುವುದರಿಂದ ಪಕ್ಷಿಗಳಿಗೆ ನೈಸರ್ಗಿಕವಾಗಿ ಆಹಾರ ದೂರೆದಂತಾತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್